ಬಾಗಲಕೋಟೆ/ ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೇ ನವೆಂಬರ್ ತಿಂಗಳ ಶುಕ್ರವಾರ ದಿ.21 ರಂದು ಮುಂಜಾನೆ 8.30 ಕ್ಕೆ 94 ನೇ ತತ್ವ-ದಶ೯ನ ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮವು ಪ.ಪೂ.ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗಲಿದೆ ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗುರು ನಾಮ ಸಂಕೀರ್ತನೆ, ಸದ್ಗುರು ಸಿದ್ಧಾರೂಢರ ಪಾರಾಯಣ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಸಾಧಕ ಸೇವಕರಿಗೆ ಸತ್ಕಾರ ಮಂಗಲ, ಪ್ರಸಾದ ನಡೆಯುವುದು ಎಂದು ಅವರು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















