
ಪಂಜಾಬಿನಲ್ಲಿ ಕರ್ತವ್ಯ ನಿರತವಾಗಿದ್ದ ಸಂದರ್ಭದಲ್ಲಿ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಯೋಧ ಚಂದ್ರು ಶೇಟ್ಟಪ್ಪ ಕಾಶಿದ ಅವರು ಮಂಗಳವಾರ ನಸುಕಿನ ಜಾವದಲ್ಲಿ ಅಕಸ್ಮಾತ್ ಹೃದಯಾಘಾತಕ್ಕೊಳಗಾಗಿ ಸಾವು ಹೊಂದಿದ್ದರು. ದೇಶಸೇವೆಯಲ್ಲಿ ತೊಡಗಿದ್ದ ಯೋಧನ ಅಕಾಲಿಕ ನಿಧನದ ಸುದ್ದಿ ಊರಿನಲ್ಲೇ ಅಲ್ಲ, ಸಮಗ್ರ ಪ್ರದೇಶದಲ್ಲೂ ಶೋಕಸಹಿತ ವಾತಾವರಣ ನಿರ್ಮಿಸಿತ್ತು.

ಮೃತ ಯೋಧನ ಪಾರ್ಥಿವ ಶರೀರವು ಅವರ ಮೂಲ ಹಳ್ಳಿಯಾದ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಕ್ಕೆ ಆಗಮಿಸಿ, ಗ್ರಾಮದ ನೂರಾರು ಜನರು ಕಣ್ಣೀರಿನ ನೋಟದಲ್ಲಿ ತಮ್ಮ ಪ್ರಿಯ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಗ್ರಾಮದ ಹೆಮ್ಮೆಯ ಯೋಧನನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಗ್ರಾಮವೇ ಕ್ಷಣಮಾತ್ರ ಮೌನಕ್ಕೆ ಜಾರಿತು.
ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಸುಟ್ಟಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಡಲಾಗಿತ್ತು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ನಂತರ ಸರ್ಕಾರಿ ಗೌರವಗಳ ನಡುವೆ, ಸೈನ್ಯ ಕವಾಯತು ಮತ್ತು ಗೌರವ, ಸೇನಾಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು, ಮೃತ ಯೋಧ ಚಂದ್ರು ಕಾಶಿದ ಅವರ ಅಂತ್ಯ ಸಂಸ್ಕಾರ ಗ್ರಾಮದಲ್ಲೇ ನೆರವೇರಿಸಲಾಯಿತು.
ವರದಿ. ವಿಠ್ಠಲ ಖೋಕಾಟೆ




















