
ತುಮಕೂರು/ಪಾವಗಡ : ಭಾರತೀಯ ಪರಿವರ್ತನ ಸಂಘ-BPS ವತಿಯಿಂದ ಕರ್ನಾಟಕ ಸರ್ಕಾರದ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎನ್ ಮಹೇಶ್ ರವರ ಬೆಂಬಲ ಮತ್ತು ಹೈಕೋರ್ಟ್ ವಕೀಲರು, ಬಿಪಿಎಸ್ ರಾಜ್ಯಾಧ್ಯಕ್ಷರಾದ ಪ್ರೊ. ಹರಿರಾಮ್ ರವರ ಮಾರ್ಗದರ್ಶನದಲ್ಲಿ ಬಿಪಿಎಸ್ ಜಿಲ್ಲಾಧ್ಯಕ್ಷರಾದ ಚಿಕ್ಕತಿಮ್ಮನ ಹಟ್ಟಿ ಗ್ರಾಮದ ಹೆಚ್ ಕೆಂಚರಾಯ ರವರು 2021 ನೇ ಸಾಲಿನಿಂದ
ನಾಲ್ಕು ವರ್ಷದ ನಿರಂತರ ಪರಿಶ್ರಮದಿಂದ ಗ್ರಾಮಸ್ಥರನ್ನು ಯಾವುದೇ ಕಚೇರಿಗಳಿಗೆ ಹೋರಾಟಕ್ಕೂ ಕರೆಯದೆ ಒಂದು ರೂಪಾಯಿ ಹಣ ಖರ್ಚು ಮಾಡಿಸದೆ ಒಂದು ನಿಮಿಷವು ಸಮಯವನ್ನು ವ್ಯರ್ಥ ಮಾಡಿಸದೆ ಸತತ ಪ್ರಯತ್ನದಿಂದ ಚಿಕ್ಕತಿಮ್ಮನಹಟ್ಟಿ ಗ್ರಾಮ ಹೊಸ ಕಂದಾಯ ಗ್ರಾಮವಾಗಿ ಪರಿವರ್ತನೆಯಾಗಿದೆ, ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲಾ ಸಮುದಾಯದ ಜನರ ಮನೆಗಳಿಗೆ ಸರ್ಕಾರದಿಂದ ಹಕ್ಕು ಪತ್ರ ನೀಡುವ ಸಲುವಾಗಿ ಮನೆಗಳ ಅಳತೆ ಕಾರ್ಯ ನಡೆಯಿತು,
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬಿಪಿಎಸ್ ರಾಜ್ಯಾಧ್ಯಕ್ಷರಾದ ಪ್ರೊ ಹರಿರಾಮ್ ತುಮಕೂರು ಜಿಲ್ಲಾಧ್ಯಕ್ಷರಾದ
ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ, ತಾಲೂಕು ಅಧ್ಯಕ್ಷರಾದ ಹರಿಹರಪುರ ಗ್ರಾಮದ ಎಚ್ ಡಿ ಈರಣ್ಣ ಹಾಗೂ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಪೃಥ್ವಿರಾಜು .ಜಿ.ವಿ



















