ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಬಿಜೆಪಿ ಘಟಕದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಆಚರಿಸಲಾಯಿತು. ನಂತರ ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿ ಪದ್ಮಾವತಿಯವರು ಮಾತನಾಡಿ ಜನನಾಯಕ, ಪದ್ಮವಿಭೂಷಣ, ಭಾರತ ರತ್ನ, ಶ್ರೇಷ್ಟ ಸಂಸದೀಯ ಪಟು, ಪ್ರಧಾನಮಂತ್ರಿ, ಕವಿ, ವಾಗ್ಮಿ, ಸಹ್ರದಯಿ, ಮಾನವತಾವಾದಿ, ನಿಷ್ಟಾವಂತ ಕಾರ್ಯಕರ್ತ, ಸರಳಜೀವಿ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯರಾಗಿದ್ದರು.
1999-2004 ರ ಅವಧಿಯಲ್ಲಿ ವಾಜಪೇಯಿ ಸರಕಾರವು ಸರ್ವತೋಮುಖ ಅಭಿವೃದ್ದಿಗೆ ಬಲವಾದ ಅಡಿಪಾಯ ಹಾಕಿತು. ಅಂತ್ಯೋದಯ ಅನ್ನಯೋಜನೆ, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ, ಸುವರ್ಣ ಚತುಷ್ಕೋನ ರಸ್ತೆ ಯೋಜನೆ ಮತ್ತು ನ್ಯೂಟೇಲಿಕಾಂ ಯೋಜನೆಗಳನ್ನು ಜಾರಿಗೆ ತಂದರು.
ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ವಾಜಪೇಯಿ ಅವರ ದೂರದೃಷ್ಟಿಯ ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಟ ಮತ್ತು ಸಮ್ರದ್ದಿ ದೇಶವನ್ನಾಗಿಸಲು ಕಂಕಣ ಬದ್ದರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷರಾದ ಟಿ.ರಾಮು, ಪಂಪಾಪತಿ.ಹೆಚ್., ಬಡಿಗೇರ ವೀರೇಶ, ಮಲ್ಲೇಶ ಹೆಚ್., ಬಾಲೆಸಾಬ್, ಚನ್ನಳ್ಳಿ ಮಹೇಶ, ಪರುಷುರಾಮ, ಸೂಗೂರು ಜಡೇಶ, ಗಾದಿಲಿಂಗ, ಎಸ್.ರಾಮಪ್ಪ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















