ಬಾಗಲಕೋಟೆ/ಹುನಗುಂದ : ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲೂಕಾ ಹುನಗುಂದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹುನಗುಂದ ಬಸವಾದಿ ಶಿವಶರಣರ ದಿವ್ಯ ಬೆಳಕಲ್ಲಿ ೩೭ ನೇ “ಮನೆ ಮನಗಳಿಗೆ ವಚನ ಸೌರಭ” ಮಾಸಿಕ ಶರಣ ಚಿಂತನ ಕಾರ್ಯಕ್ರಮವು ಶರಣೆ ಡಾ.ಶಿವಗಂಗಾ ಹಾಗೂ ಶರಣ ಅರುಣೋದಯ ದುದ್ದಗಿ ನಿರ್ದೇಶಕರು ವಿ.ಮ.ವಿ.ವ ಸಂಘ ಹುನಗುಂದ ನೀಲಗಂಗಾ ದೇವಸ್ಥಾನದ ಹಿಂಭಾಗ ಕುಂಬಾರ ಓಣಿ ಇವರ ಮನೆ ಅವರಣದಲ್ಲಿ ದಿ. ೨೯-೧೨-೨೦೨೫ ಸೋಮವಾರ, ಸಂಜೆ ೦೬:೦೦ ಗಂಟೆಗೆ ಜರುಗಲಿದೆ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ, ಇಳಕಲ್ಲ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರೊ. ಎಸ್ ಎನ್ ಹಾದಿಮನಿ. ಅಧ್ಯಕ್ಷರು, ತಾಲೂಕಾ ಶರಣ ಸಾಹಿತ್ಯ ಪರಿಷತ್ತು ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವೇ.ಮೂ. ಶ್ರೀ ಮಹಾಂತಯ್ಯ ಗಚ್ಚಿನಮಠ ಸಾಂಸ್ಕೃತಿಕ ಚಿಂತಕರು, ವಹಿಸಲಿದ್ದಾರೆ , ಬಾಗಲಕೋಟೆ ತಹಶೀಲ್ದಾರ ವಾಸುದೇವ ಸ್ವಾಮಿ ಅನುಭಾವದ, ಮಾತನಾಡಲಿದ್ದಾರೆ ಇದೇ ಸಂದರ್ಭದಲ್ಲಿ ಪ್ರೊ. ಎಮ್.ಡಿ. ಚಿತ್ತರಗಿ ಸಾಹಿತಿಗಳು ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮುದಗಲ್ಲ ಉಪಸ್ಥಿತರಿರುವರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಿವಗಂಗಾ ರಂಜಣಗಿ ವಚನಗಳಲ್ಲಿ ಕಾಯಕ ನಿಷ್ಠೆ ಎಂಬ ವಿಷಯದ ಬಗ್ಗೆ ಅನುಭವ ಹೇಳಲಿದ್ದಾರೆ ಪ್ರಭು ಮಾಲಗಿತ್ತಿಮಠ ಅಧ್ಯಕ್ಷರು, ತಾಲೂಕಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಹುನಗುಂದ ಭಾಗವಹಿಸುವರು ಮೂರು ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲೂಕಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹುನಗುಂದ ಪ್ರಕಟಣೆಯಲ್ಲಿ ಕೋರಿದ್ದಾರೆ.
- ಕರುನಾಡ ಕಂದ ಪತ್ರಿಕೆ.



















