ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೋಗ ಕೊಲ್ಲುವುದಿಲ್ಲ ನಮ್ಮೊಳಗಿನ ಭಯ ಕೊಲ್ಲುತ್ತದೆ – ಕೃಷ್ಣಗಿರಿ ಶ್ರೀಗಳು

ಗುರುಮಠಕಲ್/ಮಲ್ಲಾಪುರ: ಕ್ಯಾನ್ಸರ್ ಎಂದ ತಕ್ಷಣ ಭಯಪಡದೆ ಅದನ್ನು ಸಾಮಾನ್ಯ ತಲೆ ನೋವಿನ ಹಾಗೆ ಪರಿಗಣಿಸಿ, ಧೈರ್ಯದಿಂದಿರಿ ಅದೇ ನಿಜವಾದ ಔಷಧವಾಗುತ್ತದೆ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ‍ಅವರು ಆಯೋಜಿಸಿದ್ದ ‘ಆಯುರ್ವೇದ ಆರೋಗ್ಯ ಶಿಬಿರ’ ದಲ್ಲಿ ಮಾತನಾಡಿದ‍ರು.

ತೆಲಂಗಾಣದ ತಮ್ಮ ಆಶ್ರಮಕ್ಕೆ ಇಲ್ಲಿಂದ ಸಾಕಷ್ಟು ಭಕ್ತರು ಆಯುರ್ವೇದ ಔಷಧಕ್ಕಾಗಿ ಬರುತ್ತಿರುವದು ನನ್ನ ಗಮನಕ್ಕೆ ಬಂದಿದೆ, ನಿಮ್ಮ ಅನುಕೂಲಕ್ಕಾಗಿ ತಿಂಗಳಿಗೆ ಒಮ್ಮೆ ಮಲ್ಲಾಪುರ ಗ್ರಾಮ ಭೇಟಿ ನೀಡಿ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿದರು.

ಗೋವುಗಳ ಮೂತ್ರದಿಂದ ಶಿಲಾಜಿತ್ ಪರಿಣಾಮಕಾರಿ ಔಷಧ ತಯಾರಿಸಿ ನೀಡಲಾಗುವುದು, ಕ್ಯಾನ್ಸರ್, ಥೈರಾಯ್ಡ್, ಬಿಪಿ, ಶುಗರ್ ಇತ್ಯಾದಿ ರೋಗಗಳಿಗೆ ಆಯುರ್ವೇದದಲ್ಲಿ ಪರಿಹಾರ ಇದೆ, ಬಡ ಜನತೆಯ ಸೇವೆಯೇ ನಮ್ಮ ಗುರಿ ಎಂದು ಹೇಳಿದರು.

ತಾಯಿ, ತಂದೆ ಮತ್ತು ಗುರುಗಳು ಸಾಕ್ಷಾತ್ ದೈವ ಸ್ವರೂಪ ಇವರ ಸೇವೆಯಿಂದ ಎಲ್ಲವೂ ಪ್ರಾಪ್ತಿ ಎಂದು ಹೇಳಿದರು. ಮದ್ಯ ಸೇವನೆ ಮತ್ತು ಮಾಂಸಹಾರ ಬಿಟ್ಟು ಮಾತಾ ಮಾಣಿಕೇಶ್ವರಿ ಅಮ್ಮನವರು ನುಡಿದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಈ ಹಿಂದೆ ಚಿಂತನಳ್ಳಿ ಗವಿ ಸಿದ್ದಲಿಂಗೇಶ್ವರ ಪ್ರದೇಶದಲ್ಲಿ ನಾನು ಇದ್ದೇ,ನನಗೆ ಈ ಭಾಗದ ಔಷಧೀಯ ಸಸಿಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.

ಆಯೋಜಕ ಉಷನಪ್ಪ ಹಾಗೂ ಮುಖಂಡ ಶಿವರೆಡ್ಡಿ ಆಯುರ್ವೇದ ಶಿಬಿರ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಜಗನ್, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!