ನೇತಾಜಿ ಸುಭಾಷ್ ಚಂದ್ರ ಬೋಸ್ ವಿದ್ಯಾಲಯದ ಮಕ್ಕಳಿಗೆ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡ ಕರಾಟೆ ಸ್ವಯಂ ರಕ್ಷಣಾ ತರಬೇತಿಯ ಜಾಗೃತಿಯನ್ನು ಮೂಡಿಸಿದ ಅರವಿಂದ್ ದೊಡ್ಡಯ್ಯ ದಡದಪುರ.
ಬೆಂಗಳೂರು ನಗರದ ಸುಭಾಷ್ ಚಂದ್ರಬೋಸ್ ವಿದ್ಯಾಲಯದ ಅರೆಹಳ್ಳಿ ಬೆಂಗಳೂರು ದಕ್ಷಿಣ ವಲಯ 1ರಲ್ಲಿ ಕರಾಟೆ ತರಬೇತಿ ಜಾಗೃತಿ ಸಮಾವೇಶ ನಡೆಯಿತು. ಈ ತರಬೇತಿಯಲ್ಲಿ ಅರವಿಂದ ಯುನಿವರ್ಸ್ ಕರಾಟೆ ಸಂಸ್ಥೆಯ ನಿರ್ಮಾಪಕರಾದ ಸೆನ್ನಸೈ ಅರವಿಂದ್ ದೊಡ್ಡಯ್ಯ ದಡದಪುರ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಿದರು. ಅದೇ ರೀತಿಯಾಗಿ ಇದೇ ಸಂದರ್ಭದಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಕರಾಟೆ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕರಾಟೆ ಶಿಕ್ಷಕರಾದ ಅರವಿಂದ್ ದೊಡ್ಡಯ್ಯ ಅವರು ತಮ್ಮ ಅಭಿಪ್ರಾಯವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಕರಾಟೆ ಶಿಕ್ಷಕರ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ತುಂಬಾ ಅವಶ್ಯಕವಾಗಿದೆ ಹಾಗೂ ಕರಾಟೆ ಶಿಕ್ಷಕರನ್ನು ಕಡ್ಡಾಯವಾಗಿ ಸರ್ಕಾರ ಕರಾಟೆ ಶಿಕ್ಷಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಕರಾಟೆ ಶಿಕ್ಷಣವನ್ನು ಕಡ್ಡಾಯ ಶಿಕ್ಷಣವನ್ನಾಗಿ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಬೇಕು ಹಾಗೂ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಕರಾಟೆ ಶಿಕ್ಷಣವನ್ನು ಹೆಣ್ಣುಮಕ್ಕಳಿಗೆ ಮೊದಲು ಆದ್ಯತೆ ನೀಡಬೇಕು ಎಂದು ಕರಾಟೆ ಶಿಕ್ಷಕರಾದ ಸೆನ್ನಸೈ ಅರವಿಂದ್ ದೊಡ್ಡಯ್ಯ ದಡದಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
- ಕರುನಾಡ ಕಂದ ಪತ್ರಿಕೆ



















