ಕಂಪ್ಲಿ: ಜಯಂತ್ಯೋತ್ಸದ ಹಿನ್ನಲೆ ಅಂಬಿಗರ ಚೌಡಯ್ಯ ಸಂಘ, ಕಂಪ್ಲಿ ತಾಲೂಕು ಗಂಗಾಮತ ಸಮಾಜ ಸಂಘದ ಆಶ್ರಯದಲ್ಲಿ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಬುಧವಾರ ಜರುಗಿತು.
ಇಲ್ಲಿನ ಕಂಪ್ಲಿ-ಕೋಟೆಯ ಅಂಬಿಗರ ಚೌಡಯ್ಯ ವೃತ್ತದಿಂದ ಮೆರವಣಿಗೆ ಆರಂಭಗೊಂಡಿತು. ನಂತರ ಪಟ್ಟಣದ ನಡುವಲ ಮಸೀದಿ, ಡಾ.ರಾಜಕುಮಾರ ರಸ್ತೆ, ಅಂಬೇಡ್ಕರ್ ವೃತ್ತ, ಗಂಗಾನಗರದ ಮೂಲಕ ತಳವಾರ್ ಓಣಿಯಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಮಹಿಳೆಯರ ಕುಂಭ, ಕಳಸ ಸೇರಿದಂತೆ ವಿವಿದ್ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಧ್ವನಿವರ್ಧಕದ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.
ಶಾಸಕ ಜೆ.ಎನ್.ಗಣೇಶ ಮೆರವಣಿಗೆಯಲ್ಲಿ ಭಾಗವಹಿಸಿ, ಅಂಬಿಗರ ಚೌಡಯ್ಯನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಕರೇಕಲ್ ಪ್ರಕಾಶ್, ಉಪಾಧ್ಯಕ್ಷ ಅಂಬಿಗರ ಯಲ್ಲಪ್ಪ, ಗಂಗಾಮತ ಸಮಾಜದ ಅಧ್ಯಕ್ಷ ಎಲೆಗಾರ ನಾಗರಾಜ, ಮುಖಂಡರಾದ ಅಯೋಧ್ಯ ವೆಂಕಟೇಶ, ಬಿ.ರಮೇಶ, ನಡುವಿ ಮಲ್ಲಿಕಾರ್ಜುನ, ಕರೇಕಲ್ ಮನೋಹರ, ಉಡೆಗೋಳ್ ವೆಂಕಟೇಶ, ಯು.ಪರಮೇಶ್ವರ, ಕಟ್ಟೆ ಸಣ್ಣ ದುರುಗಪ್ಪ, ಯು.ಶರಣಪ್ಪ, ಯು.ವಿರುಪಣ್ಣ, ಆಟೋ ರಾಘವೇಂದ್ರ, ಎ.ರಮೇಶ, ಪಿ.ಮಂಜುನಾಥ, ಎಸ್.ಸಣ್ಣೆಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪಿಐ ಕೆ.ಬಿ.ವಾಸುಮುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















