
ಗುರುಮಠಕಲ್: ಪಟ್ಟಣದ ಶ್ರೀ ಬಸವೇಶ್ವರ ಆಸ್ಪತ್ರೆ ದಿನಾಂಕ: 26-01-2026 ರಿಂದ ದಿನಾಂಕ 28-01-2026 ವರೆಗೆ ಮೂರು ದಿನಗಳ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಬೆಳಿಗ್ಗೆ 10 ರಿಂದ 3 ಗಂಟೆವರೆಗೆ ಹಮ್ಮಿಕೊಂಡಿರುವದಾಗಿ ಡಾ. ಬಸವರಾಜ ಬೇಲಿ ಸುದ್ದಿಗೋಷ್ಠಿ ನಡೆಸಿ ಶುಕ್ರವಾರ ತಿಳಿಸಿದರು.
ಆಸ್ಪತ್ರೆ ಪ್ರಾರಂಭವಾಗಿ 13 ವರ್ಷ ಆಗಿರುವ ಸುಸಂದರ್ಭದಲ್ಲಿ ಶಿಬಿರದಲ್ಲಿ ಬಂಜೆತನ, ಸ್ತ್ರೀ ರೋಗ, ಥೈರಾಯ್ಡ್, ಮುಟ್ಟಿನ ಅಸ್ವಸ್ಥತೆ, ಪಿಸಿಒಡಿ, ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ಸೋರಿಯಸ್, ಮೂಲವ್ಯಾಧಿ, ರಕ್ತ ಸ್ರಾವ, ಭಗಂದರ ಮುಂತಾದ ರೋಗಗಳ ತಪಾಸಣೆ ಜರುಗುವದು ಎಂದು ತಿಳಿಸಿದರು.
ಶಿಬಿರದಲ್ಲಿ ನುರಿತ ವೈದ್ಯರಾದ ಡಾ. ವರ್ಷರಾಣಿ ಸ್ತ್ರೀ ರೋಗ ತಜ್ಞರು, ಶಸ್ತ್ರಚಿಕಿತ್ಸಕರಾದ
ಡಾ. ವಿನೋದ್ ಭಾವಿ, ಚರ್ಮರೋಗ ತಜ್ಞರಾದ ಡಾ. ಸೌಮ್ಯ ವಿ. ಭಾವಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ನಾಗಭೂಷಣ ಅವಂಟಿ, ನರಸರೆಡ್ಡಿ ಪೊಲೀಸ್ ಪಾಟೀಲ ಗಡ್ಡೆಸುಗೂರು, ವೀರಣ್ಣ ಬೇಲಿ ಉಪಸ್ಥಿತರಿದ್ದರು.
ವರದಿ: ಕರುನಾಡ ಕಂದ




















