ಬೀದರ್ :ಇತ್ತೀಚೆಗೆ ನಮ್ಮ ಹಿಂದೂ ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮ, ಶ್ರೀ ಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ರವರ ಬಗ್ಗೆ ಹೀಯಾಳಿಸಿ, ಅಸಭ್ಯವಾಗಿ ಮಾತನಾಡಿ ಹೇಳಿಕೆ ಕೊಟ್ಟ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದ್ದು ಹೇಳಿಕೆ ಕೊಟ್ಟ ಭಾಲ್ಕಿ ತಾಲೂಕಿನ ಅಟರಗಾ ಗ್ರಾಮದ ಕಾಳಿದಾಸ ತಂದೆ ಅರ್ಜುನ ಸೂರ್ಯವಂಶಿ ಎನ್ನುವವನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ
” ದ್ವೇಷದ ಭಾಷಣ ” ಧಾರ್ಮಿಕ ನಿಂದನೆ,
ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು (ಕಾಯ್ದೆ ೨೯೯),
ಧರ್ಮಗಳ ಮಧ್ಯೆ ವೈಷಮ್ಯ ಬಿತ್ತುವುದು (ಕಾಯ್ದೆ ೧೯೬,೧೯೭),
ಸಾರ್ವಜನಿಕ ಅಶಾಂತಿಗೆ ಪ್ರಚೋದನೆ (ಕಾಯ್ದೆ೩೫೩),
ರೈಲ್ವೆ ಆವರಣದಲ್ಲಿ ಅಸಭ್ಯ ವರ್ತನೆ,
ಸಾರ್ವಜನಿಕರಿಗೆ ಕಿರಿಕಿರಿ (ರೈಲ್ವೆ ಕಾಯ್ದೆ ೧೪೫/೧೯೮೯)
ಆಕ್ಷೇಪಾರ್ಹ ವಿಷಯಗಳ ಪ್ರಸಾರ (ಮಾಹಿತಿ ತಂತ್ರಜ್ಞಾನ ೨೦೦ರ ಕಾಯ್ದೆ 67) ಅಡಿಯಲ್ಲಿ
ಪ್ರಕರಣ ದಾಖಲಿಸಿ ಈ ಶಿಕ್ಷಾರ್ಹ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿನಂತಿಸಿ ಉಪ ನಿರೀಕ್ಷಕರು, ಹಾಗೂ ವೃತ್ತ ನಿರೀಕ್ಷಕರು ಬಸವಕಲ್ಯಾಣ ನಗರ ಆರಕ್ಷಕ ಠಾಣೆಯಲ್ಲಿ ದೂರನ್ನು ದಾಖಲಿಸಲಾಯಿತು.
ಈ ಸಂಧರ್ಭದಲ್ಲಿ ರವಿ ನಾವದ್ಗೇಕರ ಸಂಯೋಜಕರು ಬಜರಂಗದಳ ಬಸವಕಲ್ಯಾಣ ,
ಶ್ರೀಶೈಲ ವಾತಡೆ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಬಸವಕಲ್ಯಾಣ ,
ಪ್ರಕಾಶ ನಿರಾಳೆ ನಗರ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಬಸವಕಲ್ಯಾಣ ,
ವಿನೋದ ಬಡಗೆಕರ ಗೋರಕ್ಷ ಪ್ರಮುಖರು ವಿಶ್ವ ಹಿಂದೂ ಪರಿಷತ್ ,
ಸಚಿನ್ ಗರುಡಕರ ಸಹ ಸಂಯೋಜಕರು ಬಜರಂಗದಳ ಬಸವಕಲ್ಯಾಣ ,
ರವಿ ಜಾಧವ ಹಾಗೂ ಇನ್ನಿತರರು ಭಾಗಿಯಾಗಿದ್ದರು.
ವರದಿ: ಶ್ರೀನಿವಾಸ ಬಿರಾದಾರ



















