ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಘ ವತಿಯಿಂದ ಹೊಸಪೇಟೆಯ ಶಂಕರ ಮಠದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದ ಶ್ರೀ ವೆಂಕಟೇಶ ಬಡಿಗೇರ್ ಸಿರಿಧಾನ್ಯಗಳು ಬಂಗಾರಕ್ಕಿಂತಲೂ ಮೌಲ್ಯಯುತವಾದುದು. ಅದಕ್ಕಾಗಿ ನಮ್ಮಲ್ಲಿ ಏನೇ ಸಂಪತ್ತಿದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೆ ಎಲ್ಲವೂ ಶೂನ್ಯ. ರಾಗಿ ಜೋಳ ಸಜ್ಜೆ ಸಾಮೆ. ಕೊರಲು. ಊದಲು. ನವಣೆ. ಇನ್ನೂ ಮುಂತಾದ ಸಿರಿಧಾನ್ಯಗಳು ನಮ್ಮ ಬದುಕನ್ನು ಮುನ್ನಡೆಸುವ ಆರೋಗ್ಯದಲ್ಲಿ ಅದ್ಭುತ ಪರಿಣಾಮ ಉಂಟು ಮಾಡುವ ದಿವ್ಯ ಔಷಧ ಇದಾಗಿದೆ ಇದರಲ್ಲಿ ಕ್ಯಾನ್ಸರ್ ಕಾಯಿಲೆ ಹಾಗೂ ಬೊಜ್ಜು ಸಕ್ಕರೆ ಕಾಯಿಲೆ ನರಗಳ ದೌರ್ಬಲ್ಯ ದೇಹದ ಕಾಂತಿ ಅಪೌಷ್ಟಿಕತೆಯನ್ನು ಹೊಡೆದೋಡಿಸುವ ದೃಢತೆ ಹಾಗೂ ಸರ್ವಾಂಗಿಣ ಆರೋಗ್ಯಕ್ಕೆ ಅದ್ಭುತವಾದ ಬಾಣವಾಗಿದೆ. ಇಂತಹ ಧಾನ್ಯಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ದೀರ್ಘಾಯುಷ್ಯ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳು ಹಾಗೂ ಕೃಷಿ ಯೋಜನಾ ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ವರದಿ ರವಿಕುಮಾರ್ ಹೆಚ್.




















