ಸಿರುಗುಪ್ಪ – ಪ್ರತಿಯೊಬ್ಬ ಅಂಗಡಿ ಮಾಲೀಕರು ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿಸಬೇಕು ಗ್ರಾಹಕರು ನೀಡುವ ಮೌಲ್ಯಕ್ಕೆ ಅನುಗುಣವಾಗಿ ವಸ್ತು ಹಾಗೂ ರಶೀದಿ ನೀಡುವ ಮೂಲಕ ಅವರ ಹಿತ ಕಾಪಾಡಬೇಕು ನಿಯಮ ತಪ್ಪಿದಲ್ಲಿ ಕಾನೂನು ರೀತಿ ಅಪರಾಧವಾಗುತ್ತದೆ ಎಂದು ಜೆಎಂಎಫ್ ಸಿ ನ್ಯಾಯಾಧೀಶ ಆರ್ ಹೆಚ್ ಅಶೋಕ್ ಹೇಳಿದರು ಸಿರುಗುಪ್ಪ ನಗರದ ಅಭ ಆಂನೇಯ ಸ್ವಾಮಿ ದೇವಾಲಯದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ತಾಲೂಕು ಆಡಳಿತ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಹಸಿರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಾ ಗ್ರಾಹಕರು ಖರೀದಿಸಿದ ವಸ್ತುಗಳು ಕಳಪೆಯಾಗಿದ್ದರೆ ಗ್ರಾಹಕರ ಹಿತರಕ್ಷಣೆ ಕಾಯಿದೆ ಸದ್ಬಳಕೆ ಮಾಡಿಕೊಂಡು ಅಂಗಡಿ ಮಾಲೀಕರ ವಿರುದ್ಧ ಜಿಲ್ಲಾ ಗ್ರಾಹಕರ ಹಕ್ಕುಗಳ ಹಿತ ರಕ್ಷಣಾ ವೇದಿಕೆ ಮೂಲಕ ನ್ಯಾಯ ಪಡೆಯಬಹುದಾಗಿದೆ ಪ್ರತಿಯೊಂದು ವಸ್ತುವಿನ ವಸ್ತುನಿಷ್ಠತೆ ಬಗ್ಗೆ ಗ್ರಾಹಕರಿಗೆ ತಿಳಿ ಹೇಳುವುದು ಮಾಲೀಕರ ಜವಾಬ್ದಾರಿಯಾಗಿದೆ ವ್ಯಾಪಾರದ ಪರವಾನಿಗೆ ಪಡೆಯುವದು ಸೇರಿ ಇತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅಂಗಡಿಗಳಲ್ಲಿ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧವಾಗಿದೆ ಎಂದು ಕರೆ ಕೊಟ್ಟರು ವಕೀಲರ ಸಂಘದ ತಾಲೂಕು ಅಧ್ಯಕ್ಷ ಉಪ್ಪಾರು ವೆಂಕೋಬ, ಉಪಾಧ್ಯಕ್ಷರು ಶರೀಫ್ ಸಾಬ್, ಕಾರ್ಯದರ್ಶಿ ಎಂ ಶಿವಕುಮಾರ್, ಜಂಟಿ ಕಾರ್ಯದರ್ಶಿ ಮಂಜುಳಾ, ಅಬಕಾರಿ ನಿರೀಕ್ಷಕ ಎ ಜಿ ಅಂಬಣ್ಣ, ಪಿ ಎಸ್ ಐ ಮಲ್ಲಯ್ಯ , ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಸಹಾಯಕ ಕೃಷಿ ನಿರ್ದೇಶಕರು ಮಂಜುನಾಥ ರೆಡ್ಡಿ, ವಕೀಲರಾದ ಮಲ್ಲಿಗೌಡರು, ವೆಂಕಟೇಶ ನಾಯಕ್, ನೆಲಗುಂಟಯ್ಯ, ರುದ್ರಮುನಿ ಸಾರ್ವಜನಿಕರಿದ್ದರು.
ವರದಿ : ಮಸೀದಿ.ಅಬ್ದುಲ್ ಗೌಸ್. ಸಿರುಗುಪ್ಪ




















