ನಂಜನಗೂಡು ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಜಮಾತ್ ಈದ್ಗಾ ಮಸೀದಿಯಲ್ಲಿ ಭಕ್ತಿ ಬಾಂಧವ್ಯದ ಸಮಾನತೆಯನ್ನು ಸಾರುವ ಮೊಹರಂ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಒಟ್ಟುಗೂಡಿ ಆಚರಿಸಿದರು.
ಮುಸ್ಲಿಂ ಧರ್ಮ ಗುರುಗಳಾದ ಅಬ್ದುಲ್ ಖಾದರ್ ಸಾಬ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಅವರು ಅಲ್ಲಾ ದೇವರು ಎಲ್ಲರಿಗೂ ಸುಖ ಶಾಂತಿಯನ್ನು ನೀಡಲಿ ಎಂದು ಸಮಾಜಕ್ಕೆ ಹಾರೈಸಿದರು.
ನಾವೆಲ್ಲರೂ ಬಂಧುಬಾಂಧವರಂತೆ, ಸ್ನೇಹಿತರಂತೆ ಬಾಳೋಣ, ನಮಗೆ ಇದು ಮೊದಲನೆಯ ಹಬ್ಬವಾಗಿದೆ, ಸೇವೆಯೇ ದೇವರು ಎಂದು ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಜನಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು 40ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದರು.




















