ಇಲ್ಲಿದೆ ವಿಭಿನ್ನ ಹಣ್ಣುಗಳ ಸಿಪ್ಪೆ ಬೀಜಗಳ ಮಹಾಸಂಗಮ
ಸೃಜನಶೀಲ ವಿಕಸನದಿ ಅರಳಿರುವ ಚಿತ್ತಾರದ ಹಂಗಾಮ
ಒಂದೊಂದು ಚೌಕದಲಿ ಒಂದೊಂದು ರೀತಿಯ ವಿಹಂಗಮ
ಕಾವ್ಯದ ಸಾಲುಗಳಲಿ ಪಸರಿಸಿದೆ ಪದಪುಂಜಗಳ ಸಮಾಗಮ
ಧಾವಿಸುತಿದೆ ಸಂತಸದಿ ದಿನಕ್ಕೊಂದು ಸುಲಲಿತೆಯತ್ತ
ಶುಭ ಬೆಳಗಿನಲಿ ಬರುತಿದೆ ಮೆಲ್ಲಗೆ ಅಭಿಮಾನಿಗಳತ್ತ
ಒಲುಮೆಯಿಂದ ಸ್ವಾಗತಿಸಿ ಓಲೈಸಲು ಸುಮನಗಳತ್ತ
ನಲ್ಮೆಯಲಿ ಹಂಚಿಕೊಳಲು ನಿತ್ಯ ಕಲಾಭಿಮಾನಿಗಳತ್ತ
- ಲಲಿತಾ ಕೆ ಆಚಾರ್, ಬೆಂಗಳೂರು




















