ಕನಕಗಿರಿ :ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶಿಕ್ಷಕರ ದಿನಾಚರಣೆಯನ್ನು ಎಲ್ಲಾ ಮುದ್ದು ಮಕ್ಕಳು ತಮ್ಮ ಕಡೆಯಿಂದ ಕೇಕ್ ಅನ್ನು ತಂದು ಕತ್ತರಿಸಿ ಶಿಕ್ಷಕರ ದಿನಾಚರಣೆಯನ್ನು ಬಹಳಷ್ಟು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಶಿಕ್ಷಕರ ಆದರ್ಶ ತತ್ವಗಳನ್ನು ತಮ್ಮ ನಿತ್ಯ ಜೀವನದಲ್ಲಿ ರೂಪಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಾಗೇಶ್ ಮಾಟೂರು ಮಾರ್ಮಿಕವಾಗಿ ಹೇಳಿದರು ಮತ್ತು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣರವರ ಜೀವನ ಚರಿತ್ರೆ ಅವರ ತತ್ವ ಆದರ್ಶಗಳು ಅವರ ಪ್ರಾಮಾಣಿಕತೆಯನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ಹೇಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಾಗೇಶ್ ಮಾಟೂರ್ ಶಿಕ್ಷಕರಾಗಿರುವ ಶ್ರೀ ವೆಂಕಟೇಶ್ ರೆಡ್ಡಿ ಶ್ರೀಮತಿ ಪ್ರಿಯಾಂಕ ಶ್ರೀಮತಿ ರೇಖಾ ಶ್ರೀಮತಿ ವಿಜಯಲಕ್ಷ್ಮಿ ಶ್ರೀಮತಿ ಹುಲಿಗೆಮ್ಮ ಮತ್ತು ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




















