ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ

ಕೊಪ್ಪಳ : 04.09.2026 ರಂದು ಭಾಗ್ಯನಗರದ ಕೀರ್ತಿಕಾಲೋನಿಯ ಶಾಂತಗಿರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ ಜರುಗಿತು.


ಆರಂಭದಲ್ಲಿ ಶ್ರೀ ಶಿವನಗೌಡ ಎಲ್. ಶಾಂತಗಿರಿಯವರು ಸಂಗೀತ ಸೇವೆಗೈದರು, ನಂತರ ಕುಕನೂರಿನ ವಿದ್ಯಾನಂದ ಗುರುಕುಲ ವಿಶ್ವಸ್ತ ಮಂಡಳಿಯ ಶ್ರೀ ಜಿ ಎಸ್. ಮೇಲುಕೋಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎನ್. ಆರ್. ಕುಕನೂರ್ ಅವರು ಶ್ರೀ ಕೃಷ್ಣನ ಕುರಿತಾದ ವಿಶೇಷ ಹಾಡುಗಳನ್ನು ಹಾಡಿ ಪ್ರೇಕ್ಷಕ ಬಂಧುಗಳು ಹಾಡು ಮತ್ತು ಭಜನ್ಸ್ ನಲ್ಲಿ ತಲ್ಲಿನರಾಗುವಂತೆ ಮಾಡಿದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಂಗೀತ ಕಾರ್ಯಕ್ರಮ ಜರುಗಿತು.
ತಬಲಾ ವಾದಕರಾಗಿ ಶ್ರೀ ಶೇಖರ್ ಮಹಾಂತ್ ಹಾಗೂ ಹಾರ್ಮೋನಿಯಂ ಸಾಥ್ ನ್ನು ಶ್ರೀ ಪರಶುರಾಮ್ ದಲಬಂಜನ್ ಸಾ. ಭಾಗ್ಯನಗರ ಮತ್ತು ಭಜನೆಯಲ್ಲಿ ಶ್ರೀ ಕೃಷ್ಣ ಸೊರಟೂರ್ ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಶ್ರೀ ಏಕನಾಥ್ ಭಾವಿಕಟ್ಟಿ, ಆರ್. ಎಸ್. ಎಸ್. ನ ಕಾರ್ಯ ನಿರ್ವಾಹಕರು ಮತ್ತು ನಿವೃತ್ತ ನೌಕರರಾದ ಶ್ರೀ ಸುದೀoದ್ರ ಮತ್ತು ಶ್ರೀ ಶ್ರೀ ನಿವಾಸ, ಸಂಸ್ಕಾರ ಭಾರತಿ ತಂಡದ ಉಪಾಧ್ಯಕ್ಷರು, ಶರಣೆ ವಿಜಯಲಕ್ಷ್ಮಿ ಮುರುಗೋಡ್, ಸೇರಿದಂತೆ ಇರಕಲ್ಗಡಾದ ಸ. ಪ. ಪೂ. ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀ ಮತಿ ಇರಬಸಮ್ಮ (ನವ್ಯಾ )ಎಂ. ನೆಲಾಗಣಿ, ಭಾಗ್ಯನಗರದ ಪ್ರೇರಣಾ ಶಾಲೆಯ ಶಿಕ್ಷಕಿಯರಾದ ಗಾಯತ್ರಿ ಪಿ. ಹಳ್ಳಿ, ಶ್ರೀಮತಿ ಪೂರ್ಣಿಮಾ ರವಿ ಗೋನಾಳ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕು. ಬನಶ್ರೀ, ಭವಿಷ್, ಪ್ರತೀಕ್ಷಾ, ಭೂಮಿ, ಖುಷಿ, ಮಾನಸಾ, ಸಮರ್ಥ, ಶ್ರೇಯಾ, ಆರಾಧ್ಯ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೇಯರ ವೇಷಭೂಷಣ ಧರಿಸಿದ್ದು ಪ್ರೇಕ್ಷಕರ ಗಮನಸೆಳೆಯಿತು.
ಶ್ರೀ ಸುದೀOದ್ರ ಅವರು ಸಂಗೀತ ಕಲಾವಿದರಿಗೆ ಗೌರವ ಸನ್ಮಾನ ಮಾಡಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಕೊಪ್ಪಳದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ ಬಿ. ನೆಲಾಗಣಿಯವರು ನಿರ್ವಹಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರು ಆದಂತಹ  ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

error: Content is protected !!