ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆಮ್ ಆದ್ಮಿ ಪಕ್ಷದ ಪ್ರಚಾರದ ಎಲ್.ಸಿ.ಡಿ ವಾಹನಕ್ಕೆ ಅಧಿಕೃತ ಚಾಲನೆ

ರಬಕವಿ ಬನಹಟ್ಟಿ

ಬಾಗಲಕೋಟ್ ಜಿಲ್ಲೆಯ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಪ್ರಚಾರದ LCD ವಾಹನಕ್ಕೆ ಅಧಿಕೃತ ಚಾಲನೆ ನೀಡಲಾಯಿತು

ಪಕ್ಷದ ಪ್ರಚಾರದ ವಾಹನವನ್ನು ತೇರದಾಳ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರ್ ಅವರ ಹುಟ್ಟೂರಾದ ಮಧುಬಾವಿ ಗ್ರಾಮದಲ್ಲಿ ಗುರು ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರಚಾರದ ಎಲ್.ಸಿ.ಡಿ ಮಾದರಿಯ ವಾಹನವಕ್ಕೆ ಪೂಜೆ ಆರತಿ ಬೆಳಗುವುದರ ಮೂಲಕ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲ್ಗಿ ಗೌಡರ್ ಬರುವ 2023ರ ವಿಧಾನಸಭೆ ಚುನಾವಣೆಯ ಅಂಗವಾಗಿ , ಈ ಎಲ್ ಸಿ ಡಿ ಪರದೆಯ ವಾಹನವನ್ನು ಆರಂಭ ಮಾಡಿದ್ದೇವೆ ಮತ್ತು ಬರುವ ದಿನಮಾನಗಳಲ್ಲಿ ” ನನ್ನ ಹಳ್ಳಿ ನನ್ನ ಕನಸು ” ಅನ್ನುವಂತಹ ಒಂದು ಕಾನ್ಸೆಪ್ಟ್ ಮೂಲಕ , ಪ್ರತಿಯೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಸಂಗ್ರಹ ಮಾಡುತ್ತೇವೆ . ಇದರ ಜೊತೆಗೆ ನಾಳೆ ಮಹಾಲಿಂಗಪೂರ ನಗರದಲ್ಲಿ ತೇರದಾಳ ಮತ ಕ್ಷೇತ್ರ ಯಾವ ರೀತಿ ಬದಲಾಗಬೇಕು , ಹಾಗೂ ಯಾವ ರೀತಿ ಅಭಿವೃದ್ಧಿ ಹೊಂದಬೇಕು , ಅನುವಂತ ವಿಚಾರವನ್ನು ಸಾರ್ವಜನಿಕ ಸಮ್ಮುಖದಲ್ಲಿಯೇ ಪಕ್ಷದ ಮತಕ್ಷೇತ್ರದ ಪ್ರನಾಳಿಕೆಯನ್ನು ಕೂಡ ತಯಾರು ಮಾಡುತ್ತೇವೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತ ಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ ,ವಿಟ್ಟಲ್ ಮುಧೋಳ ವಿನೋದ್ ಉಳ್ಳಾಗಡ್ಡಿ , ಸದಾಶಿವ ಕೋಳಿಕರ್, ಸದಾಶಿವ್ ಪಟ್ಟಣಶೆಟ್ಟಿ , ಶ್ರೀಶೈಲ್ ಬುದ್ನಿ , ಕುಮಾರ್ ಭಜಂತ್ರಿ , ಬಸವರಾಜ್ ಭಜಂತ್ರಿ ಇನ್ನು ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .

ವರದಿ :
ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ