ದಾವಣಗೆರೆ:ಇಲ್ಲಿನ ನಗರದ ಡಾ|| ಪುನೀತ್ ರಾಜ್ಕುಮಾರ್ ಬಡಾವಣೆ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ಪುನೀತ್ ರಾಜ್ಕುಮಾರ್ ಬಡಾವಣೆ ನಿವಾಸಿಗಳಿಂದ ಪುನೀತ್ ರಾಜ್ಕುಮಾರ್ರವರ ಹುಟ್ಟುಹಬ್ಬವನ್ನು
ದಿ: ೧೭-೩-೨೦೨೩ ರಂದು ಸಮಿತಿಯ ಅಧ್ಯಕ್ಷರಾದ
ಶ್ರೀ ಕೆ.ಜಿ.ಸುರೇಶ್ ಇವರ ಅಧ್ಯಕ್ಷತೆಯಲ್ಲಿ ಹುಟ್ಟುಹಬ್ಬವನ್ನು ಸಡಗರದಿಂದ
ಆಚರಿಸಲಾಯಿತು. ಕಾಂಗ್ರೆಸ್ನ ಹಿರಿಯ ಮುಖಂಡರಾದ ಸೋಮಲಾಪುರ ಹನುಮಂತಪ್ಪ ಅವರು ಬೃಹತ್ ಕೇಕ್ನ್ನು ಕತ್ತರಿಸಿ ಬಡಾವಣೆ ಎಲ್ಲಾ ಸಂಘದ ಪದಾಧಿಕಾರಿಗಳಿಗೂ ಹಾಗೂ ಸರ್ವ ಸದಸ್ಯರಿಗೂ ಹಾಗೂ ಮಹಿಳೆಯರಿಗೂ ಮಕ್ಕಳಿಗೂ
ಸಿಹಿ ಕೇಕ್ನ್ನು ಹಂಚಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮಲಾಪುರ ಹನುಮಂತಪ್ಪನವರು ಬಡಾವಣೆಗೆ ಒಳ್ಳೆ ಹೆಸರನ್ನು ನಾಮಕರಣ ಮಾಡಿದ್ದೀರಿ ಹಾಗೂ ಪುನೀತ್ ರಾಜ್ಕುಮಾರ್ ಅವರಂತೆಯೇ ಬಡವರ ಕಷ್ಟಗಳಿಗೆ ತಾವು ಕೂಡ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ್ ವಕೀಲರು, ತಿಪ್ಪೇಸ್ವಾಮಿ ನಿವೃತ್ತ ಆಡಳಿತಾಧಿಕಾರಿ ಪೊಲೀಸ್ ಇಲಾಖೆ, ಮಂಜುನಾಥ್, ಸುರೇಶ್, ತಿಪ್ಪೇಸ್ವಾಮಿ, ಎಸ್.ನಾಗರಾಜಪ್ಪ, ರಾಜೀವ್, ಶಿವರುದ್ರಪ್ಪ, ವಿಶ್ವೇಶ್ವರ, ಅಶೋಕ, ಮಂಜುನಾಥ, ಉಮೇಶ್, ಆಂಜನೇಯ, ದಾದಾ, ಬುಡೇನ್, ರಾಜೇಶ್, ಚೇತನ, ರಮೇಶ್, ಶಿವಮೂರ್ತಿ ನಾಯ್ಕ, ರಾಮದಾಸ, ಶ್ರೀಶಂಕರ, ವಿಜಯ, ಮಹಮದ್ ರಫೀಕ್ ಬಡಾವಣೆಯ ಎಲ್ಲಾ ಯುವಕರು ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಕಾರ್ಯಕ್ರಮಕ್ಕೆ ಬಂದ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು
ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರೆಂದು
ಮಂಜುನಾಥ.ಹೆಚ್.ಬಿ.ಹೇಳಿದರು.