ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಲ್ ಚೇರ್ ಮತ್ತು ವಾಟರ್ ಬೆಡ್ ವಿತರಣೆ


ಹೊನ್ನಾಳಿ:ದಾವಣಗೆರೆ ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ನಿರ್ದೇಶಕರಾದ ಶ್ರೀ ವಿಜಯ ಕುಮಾರ್ ನಾಗನಾಳ ಮತ್ತು
ಬಸವಾಪಟ್ಟಣ ಯೋಜನಾಧಿಕಾರಿ ಶ್ರೀ ನವೀನ್ ನಾಯಕ್ ಇವರ ಸಂಯುಕ್ತ ನಿರ್ದೇಶನದಲ್ಲಿ
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್ ಬಸವಾಪಟ್ಟಣ
ಇವರ ವತಿಯಿಂದ ವಯಸ್ಸಾದ ವೃದ್ಧರಿಗೆ ನಡೆಯಲು ಸಾಧ್ಯವಿಲ್ಲದೇ ಮತ್ತು ಹಾಸಿಗೆಯ ಮೇಲೆ ಮಲಗಿ ಜೀವನ ಸಾಗಿಸುತ್ತಿದ್ದತಂಹವರಿಗೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾಕ್ಟರ್ ಶ್ರೀ ವಿರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಥೆಯ ಮೂಲಕ ಗ್ರಾಮಗಳಲ್ಲಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಶೌಚಾಲಯ ನಿರ್ಮಾಣ ದೇವಸ್ಥಾನ ಜೀರ್ಣೋದ್ಧಾರ
ಸ್ಮಶಾನ ಅಭಿವೃದ್ಧಿ
ಕೆರೆಗಳ ಪುನಶ್ಚೇತನ ಕಾಮಗಾರಿ
ಕುಡಿತದ ಚಟದಿಂದ ಮುಕ್ತರಾಗಲು ಮದ್ಯ ಬಿಡಿಸುವ ಕಾರ್ಯ ಮಾಡಿದ್ದಾರೆ
ಫಲಾನುಭವಿಯ ಮಗ ನಾಗರಾಜ್ ಅವರು ಮಾತನಾಡಿ ನಮ್ಮ ತಂದೆಯವರು ಸುಮಾರು ದಿನಗಳಿಂದ ಹಾಸಿಗೆ ಹಿಡಿದು ಓಡಾಡಲು ಆಗುವುದಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾಟರ್ ಬೆಡ್ ವಿತರಣೆ ಮಾಡಲಾಯಿತು ಇಂತಹ ಸಮಯದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಪೂಜ್ಯ ಶ್ರೀ ಶ್ರೀ ಧರ್ಮಸ್ಥಳ ಶ್ರೀ ವಿರೇಂದ್ರ ಹೆಗ್ಗಡೆಯವರಿಗೆ ನಾವುಗಳು ಚಿರುಋಣಿ ಎಂದು ಹೇಳಿದರು
ಸಂಸ್ಥೆಯ ಮೇಲ್ವಿಚಾರಕಿ ಪೂರ್ಣಿಮಾ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸಮಾಜದಲ್ಲಿ ಯಾವ ಯಾವ ಅನುಕೂಲಗಳು ಇವೆ ಎಂದು ಹೇಳಿದರು
ಮಕ್ಕಳಿಗೆ ವೃತ್ತಿ ಶಿಕ್ಷಣ ಕೋರ್ಸ್ ಗೆ ಶಿಷ್ಯ ವೇತನ
ಮನೆ ನಿರ್ಮಾಣಕ್ಕೆ ಸಹಾಯ ಧನ
ಶಾಲೆಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ನಿರ್ದೇಶಕರು ಶ್ರೀ ವಿಜಯ ಕುಮಾರ್ ನಾಗನಾಳ
ಬಸವಾಪಟ್ಟಣ ಯೋಜನಾಧಿಕಾರಿ ಶ್ರೀ ನವೀನ್ ನಾಯಕ್ ಸೇವಾ ಪ್ರತಿನಿಧಿ ತಾನೋಜಿರಾವ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹರಳ್ಳಹಳ್ಳಿ ಗಾಯತ್ರಮ್ಮ ಇದರು

ವರದಿ ಹೊನ್ನಾಳಿ ತಾಲೂಕು ಪ್ರಭಾಕರ ಡಿ.ಎಮ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ