ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಸ್.ಕೆ.ಫೌಂಡೇಷನ್ ವತಿಯಿಂದ ಅಂಬೇಡ್ಕರ್ ಭಾವ ಚಿತ್ರ ಸಹಿತ ನೋಟ್ ಬುಕ್ ವಿತರಣೆ

ಹನೂರು:ಕಾಡಂಚಿನ ಗ್ರಾಮಗಳ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಿಗೆ ನಮ್ಮ ಸಂಸ್ಥೆಯಿಂದ ಸಣ್ಣ ಪುಟ್ಟ ಕಿರು ಸಹಾಯ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಕಿರಾಳು ಗ್ರಾಮದ ಸಂತೋಷ್ ತಿಳಿಸಿದರು ತಾಲ್ಲೂಕಿನ ಕೊಣನ ಕೆರೆಯ ಗಿರಿಜನ ಆಶ್ರಮ ಶಾಲೆಯಲ್ಲಿ ನೊಟ್ ಪುಸ್ತಕ ಹಾಗೂ ಅಂಬೇಡ್ಕರ್ ಭಾವ ಚಿತ್ರ ಸಹಿತ ಪುಸ್ತಕ ನೀಡಿದ ನಂತರ ಮಾತನಾಡಿದ ಅವರು ಅಂಬೇಡ್ಕರ್ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಗೊಳ್ಳಬೇಕು ಅವರ ಆದರ್ಶವನ್ನು ನಾವು ನೀವೆಲ್ಲ ಪಾಲಿಸೋಣ ಮಕ್ಕಳೆ ನಿಮ್ಮ ಓದು ಮುಂದಿನ ವಿಧ್ಯಾರ್ಥಿಗಳಿಗೆ ಮಾದರಿಯಾಗಲಿ ಹಾಗೂ ಶಾಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದಾರೆ ಎಂದು ತಿಳಿಸಿದರು ಇದೇ ವೆಳೆ ಮುಖ್ಯೋಪಾಧ್ಯಾಯರಾದ ಅಂಕಪ್ಪ ಮಾತನಾಡಿ ಇವರು ನೀಡುವ ಪುಸ್ತಕವನ್ನು ಮಕ್ಕಳು ಅದರ ಜ್ಝಾನಾರ್ಜನೆ ಮಾಡಲಿಕ್ಕೆ ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು
ಇದೇ ಸಮಯದಲ್ಲಿ ಗಿರಿಜನರು ಕಾಡಂಚಿನ ಗ್ರಾಮದಲ್ಲಿ ಸಾಕಷ್ಟು ಶ್ರಮ ಜೀವಿಗಳಾಗಿದ್ದು ಅವರ ಮಕ್ಕಳೆಲ್ಲ ಇಂದು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಎಸ್ ಕೆ ಫೌಂಡೇಶನ್ ವತಿಯಿಂದ ಉಚಿತವಾಗಿ ಅಂಬೇಡ್ಕರ್ ಜೀವನ ಆಧಾರಿತ ಹಾಗೂ ನೋಟ್ ಬುಕ್ ಪೆನ್ ವಿತರಿಸಲಾಯಿತು ಇದೇ ಸಮಯದಲ್ಲಿ
ಮುಖಂಡರಾದ ಜಿಲ್ಲಾ ಬುಡಕಟ್ಟು ನಿರ್ದೇಶಕರಾದ ಜೆ ಮಹಾದೆವಸ್ವಾಮಿ,ಕೋಣನಕೆರೆ ಆಶ್ರಮ ಶಾಲೆಯ ಮುಖ್ಯಾಶಿಕ್ಷಕರಾದ ಅಂಕಪ್ಪ,ಶಿಕ್ಷಕರುಗಳಾದ ಸಿದ್ದರಾಜು,ಸಮ್ಮುನಿ ಸೇರಿದಂತೆ,ಎಸ್.ಕೆ ಫೌಂಡೇಶನ್ ಅಧ್ಯಕ್ಷರಾದ ಸಂತೋಷ್ ಕಿರಾಳು,ಹಿಂದುಳಿದ ವರ್ಗದ ನಾಯಕ ಕಾಳೇಗೌಡ್ರು,ಯುವ ಮುಖಂಡರುಗಳಾದ ವಿಜಯಕುಮಾರ್ (ಆಯರಹಳ್ಳಿ ),ಕಿರಾಳು ಗ್ರಾಮದ ಯುವ ಮುಖಂಡರುಗಳಾದ ವಿಶು,ಶಿವು,ರಾಹುಲ್,ಆದರ್ಶ್ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ