ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೃಷಿ ಡಿಪ್ಲೋಮಾ ಕೋರ್ಸ್ ರದ್ದು: ಎಬಿವಿಪಿ ಹೋರಾಟ

ಬೀದರ್:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಬೀದರ ತಾಲೂಕಿನ ಜನವಾಡಾ ಸಮೀಪವಿರುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ನಡೆಸಲಾಗುತ್ತಿದ್ದ ಈ ಭಾಗದ ರೈತರ ಮಕ್ಕಳ ಅನುಕೂಲಕ್ಕಾಗಿ 2012 ರಲ್ಲಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಎರಡು ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭವಾಗಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷ 2023-24ನೇ ಸಾಲಿನ ವಿಶ್ವವಿದ್ಯಾಲಯಕ್ಕೆ ಸ್ಥಗಿತಗೊಳಿಸಲು ಸರ್ಕಾರ ಆದೇಶ ಮಾಡಿರುತ್ತದೆ.ಬಡ ವಿದ್ಯಾರ್ಥಿಗಳಿಗೆ ಕೇವಲ 5000 ಶುಲ್ಕದಲ್ಲಿ ರಾಜ್ಯದ ಬಡ ರೈತ ಮಕ್ಕಳು ಈ ಕೋರ್ಸಿಗೆ ಪ್ರವೇಶ ಪಡೆಯಬಹುದಿತ್ತು.ಆದರೆ ಕಳೆದ 10 ವರ್ಷಗಳಿಂದ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಕೃಷಿ ಡಿಪ್ಲೋಮಾ ಕೋರ್ಸನ್ನು ಪಡೆದ ಅನೇಕ ವಿದ್ಯಾರ್ಥಿಗಳು ಅನೇಕ ಕ್ಷೇತ್ರಗಳಲ್ಲಿ “ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಕ್ಷೇತ್ರ ಸಹಾಯಕ್ಕೆ,ಖಾಸಗಿ ರಸಗೊಬ್ಬರ,ಬೀಜ ಔಷಧಿ ಕಂಪನಿಗಳಲ್ಲಿ ಉದ್ಯೋಗಗಳು ಬೇಗ ಲಭಿಸುತ್ತಿದ್ದವು.ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೂ ಅವಕಾಶಗಳಿದ್ದವು.ರಸಗೊಬ್ಬರ,ಔಷಧಿ ಅಂಗಡಿಗಳಿಗೆ ಪರವಾನಿಗೆ ಅವಕಾಶ ದೊರಕುತ್ತಿತ್ತು” ಹಾಗೂ ಅನೇಕ ಕೃಷಿ ಸಂಬಂಧಿತ ಖಾಸಗಿ ಕಂಪನಿಗಳಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಪೂರೈಸಿದವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು.ಎಸ್.ಎಸ್.ಎಲ್.ಸಿ. ಪಾಸಾಗಿ ಕೃಷಿ ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೆ ಬಿ.ಎಸ್.ಸಿ. ಪದವಿ ಪಡೆಯಲು ಶೇ. 5% ರಷ್ಟು ಮೀಸಲಾತಿ ಇತ್ತು.ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಈ ಕೃಷಿ ಡಿಪ್ಲೋಮಾ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಆದರೆ ದಿಢೀರನೆ ರಾಜ್ಯ ಸರ್ಕಾರವು ಪ್ರಸ್ತುತ ವರ್ಷದಿಂದ ಕೃಷಿ ಡಿಪ್ಲೋಮಾ ಕೊರ್ಸನ್ನು ಸ್ಥಗಿತಗೊಳಿಸಿದ್ದರಿಂದ ಕೃಷಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟವಾಗಿದೆ ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ವತಿಯಿಂದ ಬೀದರ ಜಿಲ್ಲೆಯಲ್ಲಿ ಕೃಷಿ ಶಿಕ್ಷಣಕ್ಕೆ ಒಳ್ಳೆಯ ಹವಾಗುಣ ಹೊಂದಿದೆ ಅದರ ಜೊತೆಗೆ ಬೇಕಾದ ಸುಸಜ್ಜಿತವಾದ ವಿದ್ಯಾಲಯ ಕಟ್ಟಡ,ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕೃಷಿ ಡಿಪ್ಲೋಮಾ ಕೋರ್ಸನ್ನು ಮುಂದುವರೆಸುವುದರ ಜೊತೆಗೆ ಕೃಷಿ ಮಹಾವಿದ್ಯಾಲಯ ಕೂಡಾ ಪ್ರಾರಂಭ ಮಾಡಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ಈ ಮೇಲಿನ ನಿಜ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು,ತಮ್ಮ ಕೋರಿಕೆ ಮಾಡಿಕೊಳ್ಳುವುದೇನೆಂದರೆ,ಬೀದರ ಜಿಲ್ಲೆಯ ಕೃಷಿ ಡಿಪ್ಲೋಮಾ ಕೋರ್ಸನ್ನು ಯಥಾಪ್ರಕಾರ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ಒಂದು ವೇಳೆ ಈ ಕೋರ್ಸನ್ನು ಮುಂದುವರೆಸದಿದ್ದರೆ ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯ ಸಂಬಂಧಪಟ್ಟ ಕಾಲೇಜುಗಳನ್ನು ಬಂದ್ ಮಾಡಿ, ಮುಂದಿನ ಹೋರಾಟಕ್ಕೆ ಕರೆಯನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಶಶಿಕಾಂತ ರಾಕ್ಲೆ,ಸಿದ್ಧಾರ್ಥ ಭಾವಿದೊಡ್ಡಿ,ನಿತೀಶ್ ಸಿಂಧೆ,ಅಮರ, ಅರುಣ,ಅಭಿಷೇಕ ಹಾಗೂ ಕೃಷಿ ವಿದ್ಯಾರ್ಥಿಗಳಾದ ಅಭೀಷೆಕ ಡಿ,ಆದಿತ್ಯ,ಅಭೀಷೆಕ ಆರ್,ಆದರ್ಶ,ಸಚಿನ್ ಜಿ,ಸಚಿನ್ ಆರ್,ಸಚಿನ್ ಎಲ್,ಅರುಣ,ಕ್ರಿಷ್ಣ ಬಜಾಜ,ರಾಮಶೆಟ್ಟಿ,ನವನಾಥ,ರಾಮ,ವೀರಯ್ಯ ಸ್ವಾಮಿ,ಆಕಾಶ,ವಿನೋದ,ರುಷಿತ್,ಕಾಶಿನಾಥ ಬಿ, ಕೋಶಿನಾಥ ಎಲ್,ಹಣಮಂತ,ಅಮರ್ ಎಮ್, ಅಮರ ಎಸ್,ಅವಿನಾಶ ಎಮ್,ಸೋಮೆಶ, ಆಂಜನೆಯ,ರಾಹುಲ್,ಶ್ರೀ ಕಾಂತ,ಫಿರ್ದೋಶ್, ಮಹೇಶ್,ಕೃಷ್ಣ ಕಾಂತ,ಬಾಲಾಜಿ,ಮಲ್ಲಿಕಾರ್ಜುನ್, ಸಂಜನಾ,ಬಸವೇಶ್ವರಿ,ಜಯಶ್ರೀ,ನಿಥಿನ್,ಚನವಿರ್, ಪ್ರದಿಪ ತುಕಾರಾಮ,ಸಂಕೆತ್,ರಾಂಪುರೆ ಅಭಿಜಿತ್ ವಿಶ್ವನಾಥ ಕಟ್ಟಿ,ರೋಹಿತ್,ಅನುರಾಧ,ಲಕ್ಷ್ಮೀ,ದೀಪಿಕಾ ಸಂಜನಾ ಉಪಸ್ಥಿತರಿದ್ದರು.

ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ