ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಿಕ್ಕಹೇಸರೂರಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಓಪನ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು,ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ರಿಕೆಟ್ ಪ್ರೇಮಿಗಳನ್ನು ನಾವು ಕಾಣಬಹುದು.ಈ ಒಂದು ಕ್ರೀಡೆಗೆ ಮನ ಸೋಲದವರೇ ಇಲ್ಲ ಎಂದು ಹೇಳಬಹುದು.ಈ ಟೂರ್ನಮೆಂಟ್ ಗ್ರಾಮೀಣ ಪ್ರತಿಭೆಗಳಿಗಾಗಿ ನಿಯೋಜನೆ ಮಾಡಿಲಾಗಿದೆ.
ಈ ಟೂರ್ನಮೆಂಟನಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗಾಗಿ ಮಾತ್ರ ಅವಕಾಶ ನೀಡಿದ್ದು ಇದರಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯಲು ಮತ್ತು ತಮ್ಮ ಹೆಸರು ಗುರಿತಿಸಿಕೊಳ್ಳಲು ಇದು ಒಂದು ಉತ್ತಮ ಟೂರ್ನಮೆಂಟ್ ಆಗಿದೆ ಎಂದು ಈ ಟೂರ್ನಮೆಂಟ್ ನಡೆಯಲು ಮುಖ್ಯ ಕಾರಣರಾದ ದೇವರಡ್ಡಿ ಮಡಿವಾಳ ಅವರು ತಮ್ಮ ವಯಕ್ತಿಕ ಕೆಲಸ ಬಿಟ್ಟು ಮಳೆ,ಗಾಳಿ,ಚಳಿ ಎನ್ನದೆ ಹಗಲಿರುಳು ಕೆಲಸ ಮಾಡಿ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ತಯಾರಿ ಮಾಡಿದ್ದಾರೆ ಕರುನಾಡ ಕಂದ ಪತ್ರಿಕೆಯ ವರದಿಗಾರರ ಜೊತೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕ್ರೀಡೆ ನಡೆಸಲು ಕ್ರೀಡಾಂಗಣ ಇಲ್ಲದಿರುವುದು ಬೇಸರದ ಸಂಗತಿ ಎಂದು ತಮ್ಮ ನೋವನ್ನು ಕೂಡಾ ಹಂಚಿಕೊಂಡಿದ್ದಾರೆ ಮತ್ತು ಇವರು ಕೂಡಾ ಕ್ರಿಕೆಟ್ ನ ಹುಚ್ಚು ಪ್ರೇಮಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಹೆಸರನ್ನು ಹೊಡಿ ಬಡಿ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ ಮತ್ತು ಒಳ್ಳೆಯ ಮ್ಯಾಚ ಪಿನಿಷೇರ್ ಆಟಗಾರ ಹಾಗೂ ಚಿಕ್ಕಹೇಸರೂರಿನ ಒಳ್ಳೇ ಕ್ರಿಕೆಟ್ ದೈತ್ಯ ಆಟಗಾರ ಅಂತಾನೆ ಕರೀತಾರೆ ಇಲ್ಲಿನ ಯುವಕರು ಹಾಗೂ ಕ್ರಿಕೆಟ್ ಪ್ರೇಮಿಗಳು.ಇವತ್ತು ಮೊದಲ ಪಂದ್ಯಗಳು ಪ್ರಾರಂಭವಾಗಿದ್ದು,ಯಂಗ್ ಸ್ಟಾರ್ ಕಾಚಾಪುರ ವಿರುದ್ಧ ಮಹಿಪಾಟೀಲ್ ಸಿ.ಸಿ.ಗೆಜ್ಜೆಲಗಟ್ಟಾ ಪಂದ್ಯ ಪ್ರಾರಂಭವಾಗಿದ್ದು ಮೊದಲ ಪಂದ್ಯದಲ್ಲಿ ಮಹಿ ಪಾಟೀಲ್ ಸಿ.ಸಿ ಗೆಜ್ಜೆಲಗಟ್ಟಾ ಪಂದ್ಯ ಗೆದ್ದು ಬೀಗಿದೆ.ಈ ಪಂದ್ಯದ ನಿರ್ಣಾಯಕರಾಗಿ ವಿಜಯ ಮಾಲಿಪಾಟೀಲ್ ಹಾಗೂ ಮೌನೇಶ ಜಾಲಹಳ್ಳಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ ಕಾರಣ,ಇವರು ಒಳ್ಳೆಯ ಕ್ರಿಕೆಟ್ ಪ್ರೇಮಿಗಳು ಆಗಿದ್ದು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಈ ಕ್ರಿಕೆಟ್ ಟೂರ್ನಮೆಂಟ್ ಗೋಸ್ಕರ ಮತ್ತು ಯಶಸ್ವೀ ಆಗಲು ತಮ್ಮ ಸಮಯ ಕೊಟ್ಟಿದ್ದಾರೆ.
ಈ ಗ್ರಾಮದ ಕ್ರಿಕೆಟ್ ಪ್ರೇಮಿಗಳಾದ ಕುಮಾರ ಮೇಟಿ ಹಾಗೂ ಮೌನೇಶ ಪೂಜಾರಿ ಮಾತನಾಡಿ ಈ ಪಂದ್ಯಾವಳಿ ಗಳಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯುತ್ತಾರೆ ಮತ್ತು ಇದರಿಂದ ಒಳ್ಳೆಯ ಆಟಗಾರರು ಕೂಡಾ ಪರಿಚಯವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಪಂದ್ಯವಾಡಲು ಅನುಕೂಲ ವಾಗುತ್ತದೆ ಎಂದು ಕರುನಾಡ ಕಂದ ಪತ್ರಿಕೆಗೆ ತಿಳಿಸಿದ್ದಾರೆ.
ವರದಿ:ಪುನೀತಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ