ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸೈನಿಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ:ಗಂಡು ಮೆಟ್ಟಿದ ನಾಡು ಕ್ರಾಂತಿಯ ಬೀಡು ಬೈಲಹೊಂಗಲ ಸಮೀಪದ ಇಂಚಲ ಗ್ರಾಮದಲ್ಲಿ ಶಿವಾನಂದ್ ಬೆಳಗಾವಿ 21 ವರ್ಷಗಳ ಕಾಲ ಸುಧೀರ್ಘ ಭಾರತಾಂಬೆಯ ಸೇವೆಯನ್ನು ಮಾಡಿ ಮರಳಿ ತಾಯಿ ನಾಡಿಗೆ ಆಗಮಿಸಿದ್ದಾರೆ ಇವರ ತಂದೆ ನಾಗಪ್ಪ ಬೆಳಗಾವಿ ತಾಯಿ ಶಿವನವ್ವ ಬೆಳಗಾವಿ ಇವರ ಎರಡನೇ ಮಗನಾಗಿ ಕಡು ಬಡತನದಲ್ಲಿ ಜನಿಸಿದರು. ಸೈನಕ್ಕೆ ಸೇರಲು ಹೋಗುವಾಗ ಇವರ ಹತ್ತಿರ ಹಣವಿರದೆ ಇದ್ದಾಗ ಸೇರಿಕೊಂಡ ನೆನಪು ಇವರಿಗೆ ಇಂದಿಗೂ ಕಾಡುತ್ತಿದೆ ಎಷ್ಟೇ ಬಡತನ ಇದ್ದರೂ ಸಾಧನೆ ಮಾಡುವ ಛಲ ನಮ್ಮಲ್ಲಿ ಇರಬೇಕು ಛಲ ಒಂದೇ ಇದ್ದರೆ ಸಾಧಿಸುವವನಿಗೆ ಅವನ ಮುಂದೆ ಬೇರೆ ಏನು ಬೇಕಾಗಿಲ್ಲ ಎಂದು ಮಠದ ಹತ್ತಿರ ಯೋಧರು ಹೇಳಿದರು ಶ್ರೀ ಸಿದ್ದಾರೂಡ ಸ್ವಾಮಿಗಳ ಮಠ ಹುಬ್ಬಳ್ಳಿಗೆ ವೀರ ಯೋಧನು ಆಗಮಿಸಿದನು ಯೋಧ ನನ್ನು ಬರ ಮಾಡಿಕೊಳ್ಳಲು ಊರಿನ ಗ್ರಾಮಸ್ಥರು ಹಿರಿಯರು ಗ್ರಾಮ ಪಂಚಾಯಿತಿಯ ಸದಸ್ಯರು ಹೋಗಿದ್ದರು ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದು ವೀರಯೋಧನ ಸ್ವಗ್ರಾಮಕ್ಕೆ ಆಗಮಿಸಿದನು. ಬೈಲಹೊಂಗಲದಲ್ಲಿ ವೀರರಾಣಿ ಚೆನ್ನಮ್ಮನ ಪುತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಓಪನ್ ಜೀಪ್ ನಲ್ಲಿ ವೀರಯೋಧನನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಂಡು ಪ್ರಮುಖ ಬೀದಿ ಬೀದಿಗಳಲ್ಲಿ ಮದ್ದು ಪಟಾಕಿ ಸುಡುತ್ತಾ ಬರಮಾಡಿಕೊಂಡರು ನಂತರ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿದರು ವೀರ ಯೋಧನಿಗೆ ಬೈಲಹೊಂಗಲ ಯುವಕರು ಹಿರಿಯರು ಸನ್ಮಾನ ಮಾಡಿದರು ಪೊಲೀಸರು ಹಾಗೂ ನಾಗಪ್ಪ ಗುಂಡ್ಲೂರು ಮಾಜಿ ಸೈನಿಕರು ಬೈಲಹೊಂಗಲ ಮಾಜಿ ಸೈನಿಕರ ಗೆಳೆಯ ಬಳಗದವರು ಸನ್ಮಾನ ಮಾಡಿದರು. ಮೆರವಣಿಗೆಯ ಕಾರ್ಯಕ್ರಮದಲ್ಲಿ ಸೈನಿಕರಿಗೊಂದು ಸಲಾಂ ಸೈನಿಕರ ಹಾಡುಗಳನ್ನು ಹಚ್ಚುತ್ತಾ ಜೈ ಜವಾನ್ ಜೈ ಕಿಸಾನ್ ಭಾರತ್ ಮಾತಾ ಕೀ ಜಯ್ ಎಂದು ಸೈನಿಕರು ಜೈಕಾರ ಕೂಗಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ