ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಾಂಧಿನಗರ ಸ್ಲಂ ಘೋಷಣೆ ವಿವಾದ:ಜಿಲ್ಲಾಧಿಕಾರಿಗಳ ಭೇಟಿ

ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ಗಾಂಧಿನಗರ ವಾರ್ಡನ್ನು ನಿಯಮ ಬಾಹಿರವಾಗಿ ಸ್ಲಂ ಎಂದು ಘೋಷಣೆ ಮಾಡಿರುವುದು ನಿಯಮ ಬಾಹಿರ ಎಂದು ಇತ್ತೀಚಿಗೆ ಗಾಂಧಿನಗರ ಅಭಿವೃದ್ದಿ ಮಂಡಲದ ಸದಸ್ಯರೆಲ್ಲರೂ ಕಾರವಾರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸ್ಲಂ ಘೋಷಣೆ ಹಿಂಪಡೆಯುವಂತೆ ಮನವಿ ಮಾಡಿದ್ದರು.

ಸಲ್ಲಿಕೆಯಾದ ಮನವಿ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮುಂಡಗೋಡ ತಾಲೂಕಿಗೆ ವಿವಿಧ ಇಲಾಖೆಗಳ ಪರಿಶೀಲನೆಗೆ ಬಂದಿದ್ದರು,ಈ ವೇಳೆ ಗಾಂಧಿನಗರ ಅಭಿವೃದ್ದಿ ಮಂಡಲ ಹಾಗೂ ಗಾಂಧಿನಗರ ನಿವಾಸಿಗಳ ಸಮಕ್ಷಮ ದಲ್ಲಿ ಗಾಂಧಿನಗರ ದ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಮಾನ್ಯ ಜಿಲ್ಲಾಧಿಕಾರಿಗಳು, ಈ ಬಗ್ಗೆ ನಿವಾಸಿಗಳಿಂದ ಎಸ್ಟು ವರ್ಷಗಳಿಂದ ವಾಸ ವಾಗಿದ್ದಿರಿ ಮತ್ತು ನಿವಾಸಿಗಳು ಪಡೆದಿರುವ ಪಟ್ಟಾಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದುಕೊಂಡರು.

ಇದೆ ವೇಳೆ ಅವರು ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಿoದ ಖಾಲಿ ಇರುವ ನಿವೇಶನಗಳ ಕುರಿತು ಮಾಹಿತಿಪಡೆದರು ನಂತರ ಪ್ರತಿ ಬೀದಿಗಳಲ್ಲಿ ಸಂಚರಿಸಿ ಕೂಲಂಕುಷವಾಗಿ ಗಾಂಧಿನಗರ ವಾರ್ಡ್ ನ ಚಿತ್ರಣ ಪಡೆದರು.ಈ ವೇಳೆ ಕೆಲ ವಾರ್ಡ್ ನಿವಾಸಿಗಳು ಸ್ಲಂ ಮಾಡಿರುವುದನ್ನು ತೆಗೆದುಹಾಕಿ ನಮಗೆ ಈಗಾಗಲೇ ಹಕ್ಕುಪತ್ರ ಕೊಟ್ಟದ್ದಾರೆ ನಾವೆಲ್ಲಾ 45 ವರ್ಷಗಳಿಂದ ಇಲ್ಲಿದ್ದೇವೆ ,ನಮಗೆಲ್ಲ ಮತ್ತೆ ಸ್ಲಂ ಘೋಷಣೆ ಮಾಡಿ ಮತ್ತೆ ತೊಂದರೆ ಸಿಲುಕಿಸಬೇಡಿ, ಎಂದು ಮನವಿ ಮಾಡಿದರು.ಇನ್ನೂ ಕೆಲವರು ಈಗಾಗಲೇ ಹಕ್ಕುಪತ್ರ ನೀಡಿ ಸ್ಲಂ ಎಂದು ಘೋಷಣೆ ಮಾಡಿದ್ದಾರೆ ಏನು ಬದಲಾವಣೆ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು,ವಸ್ತುಸ್ಥಿತಿ ಪರಿಶೀಲಿಸಲು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.ಈ ವೇಳೆ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರು ಆದ ದೇವರಾಜ್ ಆರ್ , ಮುಂಡಗೋಡ ತಹಶೀಲ್ದಾರ್ ರಾದ ಶಂಕರ್ ಗೌಡಿ, ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಆದ ಚಂದ್ರಶೇಖರ್ ಬಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ