ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆಜಿವಿಎಸ್ ಜಿಲ್ಲಾ ಸಮ್ಮೇಳನ ಹಾಗೂ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಕೆ.ಜಿ.ವಿ.ಎಸ್ ಧಾರವಾಡ ಜಿಲ್ಲೆ. ಎ. ಎಂ. ಆರ್ ಸಂಜೀವಿನಿ ಸಂಸ್ಥೆ ಅರಕೇರಿ 2 ಹಾಗೂ ಸ್ಪೂರ್ತಿ ಕರಿಯರ್ ಅಕ್ಯಾಡೆಮಿ ಸ್ಪಧಾ೯ಚುಕ್ಕಿ ಗ್ರೂಪ್ ಹುಬ್ಬಳ್ಳಿ ಮತ್ತು ನೋಬಲ್ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೆಜಿವಿಎಸ್ ಜಿಲ್ಲಾ ಸಮ್ಮೇಳನ ಹಾಗೂ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ವಿಶೇಷ ಉಪನ್ಯಾಸ ವೈಚಾರಿಕತೆ ಮತ್ತು ವೈಜ್ಞಾನಿಕ ಸಂದೇಶ ನೀಡುವ ಕವಿಗೋಷ್ಠಿ ಮತ್ತು ಪವಾಡ ಬಯಲು ಕಾರ್ಯಕ್ರಮವು ಇದೇ ಆಗಸ್ಟ್ 13 ರಂದು ರವಿವಾರ ಮಧ್ಯಾಹ್ನ 3-00 ಗಂಟೆಗೆ ಹುಬ್ಬಳ್ಳಿಯ ನೇಕಾರನಗರದ ನೇತಾಜಿ ಕಾಲೋನಿ ಬೆನ್ನೂರು ಪ್ಲಾಟಿನಲ್ಲಿರುವ ನೋಬಲ್ ಪಬ್ಲಿಕ್ ಸ್ಕೂಲ್ ನಡೆಯಲಿದೆ.ಈ ಕಾಯ೯ಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಈ.ಬಸವರಾಜು ಉದ್ಘಾಟಕರಾಗಿ ಶ್ರೀ ಸದಾನಂದ ಡಂಗನವರ ಪ್ರೊ ಎ ಎಮ್ ಸಾತ್ಮಾರ ಶ್ರೀ ಸಿರಾಜ್ ಅಹ್ಮದ್ ಕುಡಚಿವಾಲೆ ಡಾ ಸುರೇಶ್ ಹೊರಕೇರಿ ಪ್ರೋ ಎಸ್ ಆರ್ ಆಶಿ ಡಾ ವಿ ಬಿ ನಿಟಾಲಿ ಡಾ ಸಿ ತ್ಯಾಗರಾಜ ಡಾ ಹೇಮಂತ ಕುಂದರಗಿ ಶಿವಾನಂದ ಬಿ ವಿ ಡಾ ಮಂಜುನಾಥ ಬಾರಕೇರ ಹಾಗೂ ಸಾಹಿತಿಗಳು ಕವಿಗಳು ಜಿಲ್ಲಾ ಮತ್ತು ತಾಲ್ಲೂಕುಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಜೆವಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಮೋತಿಲಾಲ ರಾಥೋಡ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ‘ವೈಜ್ಞಾನಿಕ ಮನೋದೃಷ್ಟಿ’ ಎಂಬ ವಿಷಯದಡಿಯಲ್ಲಿ ಕವನ ವಾಚನಕ್ಕೆ ಆಹ್ವಾನಿಸಲಾಗಿದ್ದು ಭಾಗವಹಿಸುವ ಕವಿಗಳು ಕೆಜಿವಿಎಸ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಮೋತಿಲಾಲ ರಾಥೋಡ್ 9880274452 ಅವರಲ್ಲಿ ನೊಂದಾಯಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ