ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರತಿವರ್ಷವೂ ಉದ್ಯೋಗ ಮೇಳ:ಸಮಕುಲಾಧಿಪತಿ ಅಲಿ ಅಲ್ ಹುಸೇನ

ಕಲಬುರಗಿ:ಕೆಬಿಎನ್ ವಿವಿ ವತಿಯಿಂದ ಇದೇ ಪ್ರಥಮ ಬಾರಿಗೆ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಕೂಡ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೆಬಿಎನ್ ವಿವಿ ಸಮಕುಲಾಧಿಪತಿ ಜನಾಬ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಹೇಳಿದರು.
ಕೆಬಿಎನ್ ವಿವಿಯ ಆವರಣದಲ್ಲಿ ಶನಿವಾರ ಮುಸ್ಲಿಂ ವೃತ್ತಿಪರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಬೃಹತ್ ಉದ್ಯೋಗ ಮೇಳವನ್ನುದ್ದೇಶಿಸಿ ಅವರು ಮಾತನಾಡಿದರು ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸಲು ಪರಿಣಿತರನ್ನಾಗಿ ಪರಿವರ್ತಿಸುವ ತರಬೇತಿ ನೀಡಲಾಗುವುದು ಮೊದಲ ಬಾರಿಗೆ ಎ ಎಂ ಪಿ ಸಹಯೋಗದ ಉದ್ಯೋಗ ಮೇಳ ಇಲ್ಲಿನ ಅಭ್ಯರ್ಥಿಗಳಿಗೆ ವರದಾನವಾಗಿದ್ದು ಇದರ ಯಶಸ್ಸಿ ಶ್ರಮಪಟ್ಟ ಯೋಜನೆಯ ಮುಖ್ಯಸ್ಥ ಜಿಲ್ಹಾನಿ,ವಿಸಿ ಪ್ರೊ.ಅಲಿ ರಜಾ ಮೂಸ್ವಿ ಹಾಗೂ ಎಲ್ಲಾ ನೌಕರರಿಗೆ ಧನ್ಯವಾದ ತಿಳಿಸಿದರು ಕೆಲಸ ಪಡೆದ ಅಭ್ಯರ್ಥಿಗಳಿಗೆ ಅಭಿನಂದಿಸಿದರು.
ಎ ಎಂ ಪಿಯ ಉದ್ಯೋಗ ಸಹಾಯಕ ಕೋಶದ ಮುಖ್ಯಸ್ಥ ಶಾಹಿದ್ ಹೈದರ್ ಇವರು,ಕೆಬಿಎನ್ ವಿವಿಯು 60 ವರ್ಷಗಳಿಂದ ಶಿಕ್ಷಣ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘನೀಯ,ಮುಂದಿನ ದಿನಗಳಲ್ಲಿ ಕೆಬಿಎನ್ ಸಂಸ್ಥೆ ಕಲಬುರಗಿಯ ಯುವಕರ,ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದರು.
ಈ ಮೇಳದಲ್ಲಿ ಸುಮಾರು ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದು 200 ಅಭ್ಯರ್ಥಿಗಳ ಕಿರುಪಟ್ಟಿ ತಯಾರಿಸಲಾಯಿತು.

ಈ ಮೇಳದಲ್ಲಿ ಕೋಟಕ್ ಮಹಿಂದ್ರಾ,ಅಮೆಜಾನ್, ಆಪೋಲ್ಲೋ,ಶಾಹ್ ಹುಂಡೈ,ವಿ5 ಗ್ಲೋಬಲ್,ವಲ್ಲಿ ಎಂಟರ್ಪ್ರೈಸಸ್,ಎಂಎಸ್ ಎಫ್,ತುರ್ತುಲ್ಮೆಂಟ್, ಟೆಲಿಪರ್ಫಾರ್ಮೆನ್ಸ್ ಅಂಡ್ ಗ್ಲೋಬಲ್ ಸರ್ವಿಸ್, ಓ ಟಿ ಎಚ್ ಪಿ ಮುಂತಾದ ಕಂಪನಿಗಳು ಬೆಂಗಳೂರು,ಮೈಸೂರು,ಕಲಬುರ್ಗಿ,ರಾಯಚೂರ ಮತ್ತು ಹೈದರಾಬಾದ್ ನಿಂದ ಆಗಮಿಸಿದ್ದವು.
ವರದಿ:ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ