ಬಾಗಲಕೋಟೆ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಅನುಮೋದನೆಯೊಂದಿಗೆ ಕಾನೂನು ವಿಭಾಗದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ಹಿರಿಯ ನ್ಯಾಯವಾದಿಗಳಾದ ಡಾ ಅಭೀಷೇಕ್ ಮನು ಸಿಂಘ್ವಿಯವರ ಆದೇಶದಂತೆ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಂ ಧನಂಜಯ್ ರವರು ನನ್ನನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ, ನನ್ನನ್ನು ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲು ಕಾರಣಿಕರ್ತರಾದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರು, ರಾಜ್ಯ ಕಾನೂನು ಹಾಗೂ ಸಂಸದಿಯ ವ್ಯವಹಾರಗಳ ಮತ್ತು ಕಾನೂನು ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಹೆಚ್ ಕೆ ಪಾಟೀಲ್ ರವರು, ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್ ಬಿ ತಿಮ್ಮಾಪುರ ರವರು, ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್ ರವರು, ಜಿಲ್ಲೆಯ ಶಾಸಕರುಗಳಾದ ಶ್ರೀ ಹೆಚ್ ವಾಯ್ ಮೇಟಿರವರು, ಶ್ರೀ ಜೆ ಟಿ ಪಾಟೀಲ್ ರವರು, ಶ್ರೀ ವಿಜಯಾನಂದ ಕಾಶಪ್ಪನವರು, ಮಾಜಿ ಶಾಸಕರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠರವರು, ಮಾಜಿ ಸಚಿವರಾದ ಶ್ರೀ ಅಜಯ್ ಕುಮಾರ್ ಸರ್ ನಾಯಕ್ ರವರು, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸಂಯೋಜಕರಾದ ಶ್ರೀ ಚಂದ್ರಶೇಖರ ರಾಠೋಡ್ ರವರಿಗೆ ಹಾಗೂ ಪಕ್ಷದ ಮುಖಂಡರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ
ನನಗೆ ವಹಿಸಿದ ಈ ಜವಾಬ್ದಾರಿಯನ್ನು ಪಕ್ಷದ ಸಂಘಟನೆಗೆ ಬಳಸಿಕೊಂಡು, ಸಂವಿಧಾನದ ರಕ್ಷಣೆಗಾಗಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರು ನಡೆಸುತ್ತಿರುವ ಪ್ರತಿ ಹೋರಾಟದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಭಾಗಿಯಾಗಿ ಪಕ್ಷದ ಬಲವರ್ಧನೆ ಮೂಲಕ ದಮನಿತ ಸಮುದಾಯಗಳ ಏಳಿಗೆಗಾಗಿ ಹಗಲಿರುಳೂ ಶ್ರಮಿಸುತ್ತೇನೆ ಎಂದು ಶ್ರೀ ರಮೇಶ್ ಆರ್ ಬದ್ನೂರ, ವಕೀಲರು ಬಾಗಲಕೋಟೆ
ಇವರು ತಿಳಿಸಿದರು.
ವರದಿ: ಯಮನಪ್ಪ ಮಾದರ




















