ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ : ಜ್ಞಾನ ಗಂಗೋತ್ರಿ

ನಾಯಗಾವ ಸಾತಾರದ ಸಾವಿತ್ರಿ
ಸ್ತ್ರೀ ಶಿಕ್ಷಣ ಗಂಗೋತ್ರಿ
ಅಶಿಕ್ಷಿತ ಬಾಲಿಕೆ ಲಕ್ಷ್ಮಿ ಖಂಡೋಜಿ
ದಂಪತಿಗಳ ಸುಪುತ್ರಿ
ಬಾಲ್ಯವಿವಾಹದಿ ಜ್ಯೋತಿಬಾ ಫುಲೆ
ಇವರ ಧರ್ಮ ಪತ್ನಿ//

ಅನ್ಯಾಯ ಅಸತ್ಯ ವಿರುದ್ಧ ಕಹಳೆ
ಮೊಳಗಿದ ಫುಲೆಯವರು
ಮುಗ್ಧ ಮನದನ್ನೆಗೆ ಮನೆಯಲಿ
ಶಿಕ್ಷಣ ಹೇಳಿಕೊಟ್ಟವರು
ಪುಣೆಯ ಭಿಡೆವಾಡಾದ ಮನೆಯನೆ
ಮಹಿಳಾ ಶಾಲೆ ಮಾಡಿದರು//

ಭಾರತದ ಪ್ರಥಮ ಮಹಿಳಾ ಶಿಕ್ಷಕಿ
ಪುಣ್ಯಸ್ರ್ತಿ ಸಾವಿತ್ರಿಯಾದರು
ಕರ್ಮಠರ ತ್ರಾಸಿಗೆ ಎದೆಗುಂದದೆ
ಗಂಡುಗಲಿಯಾದರು
ಮಹಿಳಾ ಅಧಿಕಾರ ಹಕ್ಕುಗಳಿಗಾಗಿ
ಸತತ ಹೋರಾಡಿದರು//

ಮೇಲ್ವರ್ಗ ಮಹಿಳೆಯರ ಕೇಶವಪನ
ಸತಿ ಸಹಗಮನ
ಬಾಲ್ಯವಿವಾಹ ವಿರೋಧಿಸಿದರು
ವಿಧವಾಪುನರ್ವಿವಾಹ
ಮಾನ್ಯತೆಗೆ ಮಹತ್ವ ಕೊಟ್ಟ ದಂಪತಿ
ಮಹಾತ್ಮರೆನಿಸಿದರು//

ಕಾವ್ಯೊಫುಲೆ ಕಾವ್ಯಸಂಗ್ರಹ ಲೇಖಕಿ
ಬರಹಗಾರ್ತಿ ಕವಯಿತ್ರಿ
ಬಾವನ್ನಕಶಿ ಸುಬೋಧ ರತ್ನಾಕರ
ಪತಿಮೇಲೆ ಬರೆದ ಸಾವಿತ್ರಿ
ಸಾಮಾಜಿಕ ಕ್ರಾಂತಿಯ ಜ್ಯೋತಿ
ಸ್ರ್ತೀ ಶಿಕ್ಷಣ ಗಂಗೋತ್ರಿ//

ಪ್ರಜ್ವಲಿಸುವ ಪ್ರಖರ ಜ್ಞಾನ ದೀಪದಿ
ಪುಣೆಯಲಿ ಬೆಳಗುತಿದೆ
ಸ್ನಾತಕೋತ್ತರ ವಿದ್ಯಾಲಯವಿಂದು
ತಲೆಯೆತ್ತಿ ಕರೆಯುತಿದೆ
ಉತ್ಕಟ ಸ್ರ್ತೀವಾದಿ ಸ್ವಾಭಿಮಾನದ ಖಣಿ
ನಿನಗೆ ನಾವು ಚಿರಋಣಿ//

  • ಅನ್ನಪೂರ್ಣ ಸು. ಸಕ್ರೋಜಿ ಪುಣೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!