ಗಾದೆಯ ಗೂಢಾರ್ಥ ಏನು…ಗೊತ್ತಾ ?
ಈ ಗ್ರಾಮೀಣ ಭಾಗದ ಅನುಭವದ ಗಾದೆಯ ಹಿಂದಿನ ಗೂಢಾರ್ಥ ನಮ್ಮ ಪುರಣದಲ್ಲಿದೆ. ಕಳ್ಳ –ಕೃಷ್ಣ ಗೋಕುಲದ ಬಾಲಕೃಷ್ಣನ ತುಂಟಾಟ ಕೃಷ್ಣನು ಗೋಪಿಯರ ಮನೆಗಳಲ್ಲಿ ಬೆಣ್ಣೆ, ಹಾಲು ಮತ್ತು ಮೊಸರನ್ನು ಕದ್ದು ತಿಂದು, ಅವರ ಮನಸ್ಸನ್ನು ಗೆಲ್ಲುತ್ತಿದ್ದನು. ಇದು ಕೇವಲ ಕಳ್ಳತನವಲ್ಲ, ಬದಲಾಗಿ ಭಕ್ತರ ಪ್ರೀತಿಯನ್ನು ಸ್ವೀಕರಿಸುವ ದೈವಿಕ ಲೀಲೆ ಎಂದು ನಂಬಲಾಗಿದೆ.
ಕುಳ್ಳ – ತ್ರಿವಿಕ್ರಮ ಅಸುರ ರಾಜ ಮಹಾಬಲಿಯು ಅತ್ಯಂತ ದಾನಶೀಲನಾಗಿದ್ದರೂ, ದೇವತೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಸ್ವರ್ಗದ ಮೇಲೆ ಅಧಿಪತ್ಯ ಸಾಧಿಸುತ್ತಾನೆ ಇವನ ಅಟ್ಟಹಾಸ ತಡೆಯಲು ವಿಷ್ಣುವು ವಾಮನನಾಗಿ ಅವತರಿಸುತ್ತಾನೆ.
ಈ ಕಾರಣಕ್ಕೆ ಕಳ್ಳ ಕೃಷ್ಣ ನಂಬಿದರು , ಕುಳ್ಳ ತ್ರಿವಿಕ್ರಮ ನನ್ನ ನಂಬಬಾರದು ಎಂಬುದು ಪುರಾಣದ ಗೂಢಾರ್ಥ ವಾಗಿದೆ.
- ಸವಿತಾ, ತುಮಕೂರು




















