ಬಾಗಲಕೋಟೆ-ಮುಧೋಳ : ಕಳೆದ ಮೇ 17 ರಿಂದ ಅಧಿಕಮಾಸದ ಪ್ರಯುಕ್ತ ಪ್ರಾರಂಭಗೊಂಡ ಭಕ್ತರ ಕಾಮಧೇನು ಶ್ರೀಸಿದ್ಧಾರೂಢರ ಪಾರಾಯಣ. 152 ನೇ ರವಿವಾರದ ಸತ್ಸಂಗ. ಹಾಗೂ ಜಗನ್ಮಾತೆ ಶ್ರೀ ದೇವಿ ಮಹಾತ್ಮೆ ಪುರಾಣ ಮಂಗಲೋತ್ಸವ ಸಮಾರಂಭವು ಇದೇ ಜೂನ್ ರವಿವಾರದ ದಿ.14 ರಂದು ಮುಂಜಾನೆ 10 -30 ಕ್ಕೆ ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಪುಣ್ಯ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಸ್ಥಿತಪ್ರಜ್ಞ ಮಹಾಪುರುಷ ಶ್ರೀಗುರುನಾಥಾರೂಢರ ಮಠದ ಪ.ಪೂ.ಶ್ರೀಶಂಕರಾನಂದ ಶ್ರೀಗಳ ಸಾನಿಧ್ಯದಲ್ಲಿ ಶ್ರೀಸಿದ್ಧಾರೂಢಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುವವು.
ವಿಶೇಷವಾಗಿ ಜಿಲ್ಲೆಯ ಕಲಾವಿದರಿಂದ ಶಿವಭಜನೆ.ತತ್ವಪದ.ಡೊಳ್ಳಿನಪದ. ಸೋಬಾನೆಪದ. ಹಂತಿಹಾಡು.ರಿವಾಯಿತ. ಮುಂತಾದ ಕಲಾವಿದರಿಂದ ಜನಪದ ಸೇವೆ ಜರುಗಲಿದೆ. ಹಾಗೂ ವಿಶೇಷವಾಗಿ ತಾಯಂದಿಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವುದು. ಮತ್ತು ಬಾದಾಮಿಯ ಜಲಗೇರಿಯ ಚಿನ್ನಪ್ಪಗೌಡ ಗಿಡ್ಡಪ್ಪಗೋಳ ದಂಪತಿಗಳಿಗೆ ಗೌರವ ಸಮರ್ಪಣೆ ನಡೆಯುವದು. ಉತ್ತೂರಿನ ಪೂಜ್ಯರಾದ ವಿಠಲ ಮಹಾರಾಜರಿಂದ ಪ್ರವಚನ ನಡೆಯುವದು.
ಅಲ್ಲದೆ ಭಾಗವಹಿಸಿದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ.ಮಹಾಳಿಂಗೇಶ್ವರ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಅವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 9972682938 ಈ ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.
- ಕರುನಾಡ ಕಂದ ಸುದ್ದಿ



















