ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನವಂಬರ್ ಕನ್ನಡಿಗರು

ಬೊಬ್ಬೆ ಇಡುವರು ಇಂದು,
ಕನ್ನಡ ಕನ್ನಡ ಎಂದು
ಬಂದಿದೆ ಮತ್ತೆ ನವಂಬರ್ ಒಂದು,
ಈ ದಿನ ಮಾತ್ರವೇ ಕನ್ನಡಿಗರೆಲ್ಲ ಒಂದು,
ಮರುದಿನದಿಂದಲೇ ಹಾಯ್ ಹಲೋ,ಬಾಯ್,
ಎನ್ನುತ್ತಾ ಆಂಗ್ಲಮ್ಮನಿಗೇ
ಶರಣಾಗುವರು,
ಕನ್ನಡಮ್ಮನ ಮರೆಯುವವರು
ಕನ್ನಡಿಗರಿವರು ನವಂಬರ್ ಕನ್ನಡಿಗರು,!
ಕ್ಷಮಿಸಿ ನೀವು ಈ ಕನ್ನಡಿಗರಾದರೆ!
ಕನ್ನಡ ನಾಡನು ಉಳಿಸೋಣ,
ಕನ್ನಡ ಭಾಷೆಯ ಬೆಳೆಸೋಣ,
ಕನ್ನಡಿಗರಾಗಿ ಬದುಕೋಣ.
ಕನ್ನಡಿಗರು ನಾವು ವಿಶಾಲ ಹೃದಯದವರು,
ಅಲ್ಲವೇ ಮತ್ತೆ? ಅದಕ್ಕೆ ಅಲ್ಲವೇ
ಈಗ ನಾವೆಲ್ಲ ಹುಡುಕುತ್ತಿರುವೆವು,…
ಎಲ್ಲಿದೆ ಕನ್ನಡ,ಕನ್ನಡ?
ಎತ್ತ ನೋಡಿದರೂ ಎನ್ನಡ,
ಎಕ್ಕಡ,
ಕಾಣುತ್ತಿಲ್ಲ ಯಾರಿಗೂ ನಮ್ಮ ಕನ್ನಡ!
-ಶಿವಪ್ರಸಾದ್ ಹಾದಿಮನಿ,ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ