ಕೊಟ್ಟೂರು:ದಿ 13/12/2023 ರಂದು ಬೆಳಗಾವಿ ಸುವರ್ಣ ಗಾರ್ಡನ್ ಟೆಂಟ್ ನಂಬರ್ 06 ರಲ್ಲಿ ಪ್ರತಿಭಟನೆ ಧರಣಿ ನಡೆಸಲು ಕೆಲ ಷರತ್ತು ಬದ್ದ ಅನುಮತಿ ಪತ್ರ ದೊರೆತಿದೆ ಆದ್ದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ,ನಾಡಿನ ಪತ್ರಕರ್ತರ ಪ್ರಮುಖ ಬೇಡಿಕೆಗಳಾದ ಉಚಿತ ಬಸ್-ಪಾಸ್, ಪತ್ರಕರ್ತರ ರಕ್ಷಣಾಕಾಯ್ದೆ,ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300 ಕ್ಕೂ ಅಧಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಕಾರ್ಮಿಕ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ವಹಿಸಬೇಕಂಬ ಬೇಡಿಕೆಗಳ ಈಡೇರಿಕೆಗೆಗಾಗಿ ಬೆಳಗಾವಿ ಸುವರ್ಣ ಸೌಧದ ಮುಂದೆ ಇರುವ ಸುವರ್ಣ ಗಾರ್ಢನ್ ಟೆಂಟ್ ನಂಬರ್ 06 ರಲ್ಲಿ ನಮ್ಮ ಸಂಘಟನೆ ನಡೆಸುವ ಪ್ರತಿಭಟನೆ ಧರಣಿಗೆ ಬೆಳಗಾವಿ ನಗರದ ಪೋಲಿಸ್ ಅಯುಕ್ತರು ಇಂದು ಷರತ್ತು ಬದ್ದ ಅನುಮತಿ ಪತ್ರವನ್ನು ನೀಡಿದ್ದು ಇದರ ಪ್ರತಿಯೊಬ್ಬ ಪದಾಧಿಕಾರಿ,ಸದಸ್ಯರು ಹಾಗೂ ಮಾದ್ಯಮ ಮಿತ್ರರು
ಭಾಗವಹಿಸಲು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗೌರವ ಅದ್ಯಕ್ಷ ಚಿಗಟೇರಿ ಜಯಪ್ಪ ಕೋರಿದ್ದಾರೆ.ಅತ್ಮೀಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಇವರ ನೇತ್ರತ್ವದಲ್ಲಿ ಪತ್ರಕರ್ತರ ಸಮಸ್ಯೆಗಳ ಕುರಿತು ಸರಕಾರಕ್ಕೆ ಎಚ್ಚರಿಕೆ,ಪತ್ರಕರ್ತರ ಕುಟುಂಬಕ್ಕೆ ಪರಿಹಾರ,ಮಾಶಾಸನ,ಬಸ್ ಪಾಸ್ ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಮಸ್ಯೆಗಳ ಹೋರಾಟಕ್ಕೆ ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ನಾಡಿನ ಪತ್ರಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೊಟ್ಟೂರು ತಾಲೂಕು ಗೌರವ ಅಧ್ಯಕ್ಷರು ಚಿಗಟೇರಿ ಜಯಪ್ಪರವರು ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




















