ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

21ನೇ ದಿನಕ್ಕೆ ಕಾಲಿಟ್ಟ ಹಕ್ಕು ಪತ್ರಕ್ಕಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಡಿ.4 ರಂದು ಆರಂಭಗೊಂಡ ಕೊಳೆಗೇರಿ ನಿವಾಸಿಗಳ ಅಹೋರಾತ್ರಿ ಧರಣಿ ಸತ್ಯಾಗ್ರಹವು 21ನೇ ದಿನಕ್ಕೆ ಕಾಲಿಟ್ಟಿದೆ.
40ಕ್ಕೂ ಹೆಚ್ಚು ಕುಟುಂಬಗಳು 50 ವರ್ಷಗಳಿಂದ ಕೊಳಗೇರಿಯ ನಿವಾಸಗಳಲ್ಲಿ ವಾಸವಾಗಿದ್ದು,ಹಲವು ಬಾರಿ ಜನಪ್ರತಿನಿಧಿಗಳಿಗೆ,ಸಂಬಂಧಪಟ್ಟ ಅಧಿಕಾರಿಗಳಿಗೆ,ಕೊಳಚೆ ನಿರ್ಮೂಲನಾ ಮಂಡಳಿಗೆ, ಹಕ್ಕು ಪತ್ರಕ್ಕಾಗಿ ಮನವಿಯನ್ನು ನೀಡುತ್ತಾ ಬಂದಿದ್ದು, ಮಂಡಳಿಯವರೇನೋ ಸಕಾರಾತ್ಮಕ ಸ್ಪಂದನೆ ನೀಡುತ್ತಾ ಬಂದರು.ಅದನ್ನೇ ನಂಬಿಕೊಂಡು ಇದುವರೆಗೂ ಹಕ್ಕುಪತ್ರಕ್ಕಾಗಿ ಕಾದೆವು ಅವರ ಭರವಸೆಯ ಮಾತುಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದ್ದೇವೆ ಅಧಿಕಾರಿಗಳು,ಜನಪ್ರತಿನಿಧಿಗಳ ಮಾತು ಮಾತಾಗಿ ಉಳಿದಿದೆಯೇ ಹೊರತು ಹಕ್ಕು ಪತ್ರ ಯಾವುದು ಸಿಗಲಿಲ್ಲ.
ಇದುವರೆಗೂ ಅವರ ಸ್ಪಂದನೆಯಿಂದ ಯಾವುದೇ ಪ್ರಯೋಜನವಾಗಿರುವುದಿಲ್ಲ ಆದ್ದರಿಂದಲೇ ಕೊಳಗೇರಿಯ ಬಡ ಕುಟುಂಬದ ನಿವಾಸಿಗಳು ಹಗಲು-ರಾತ್ರಿ ಹಕ್ಕು ಪತ್ರಕ್ಕಾಗಿ ಧರಣಿ ಸತ್ಯಾಗ್ರಹಕ್ಕೆ ಕುಳಿತಿರುವುದಾಗಿ ಧರಣಿ ನಿರತರು ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿಭಟನೆಯಲ್ಲಿ ಕೊಳಗೇರಿ ನಿವಾಸಿ ಮುಖಂಡ ಪರಶುರಾಮ ರಾಯಭಾಗ,ರಾಮು ಕಳಂಕರ, ನಾಗರಾಜ ಆಗಾಸಿ,ರೂಪಾ ದೊಡಮನಿ,ಅಲ್ಲಾಭಕ್ಷ ಪನಿಬಂದ್,ಜಾವಿದ್ ಸಯ್ಯದ್,ಮೈಮುನ್ ಒತ್ತಿಗೇರಿ, ಕಾಶವ್ವ ರಾಯಭಾಗ ಹಾಗೂ ಹರಳಯ್ಯ ಕಾಲೊನಿ ನಿವಾಸಿಗಳು ಉಪಸ್ಥಿತರಿದ್ದರು.

ವರದಿ:ಕೆ ಆರ್ ಶಂಕರ್ ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ