ಯಾದಗಿರಿ ಜಿಲ್ಲಾಧ್ಯಂತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಖಂಡಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಭಾಗದಲ್ಲಿ ನಿರಂತರ ಧರಣೆ ಮಾಡುವುದರ ಮುಖಾಂತರ ಮೂರನೇ ದಿನಕ್ಕೆ ಕಾಲಿಟ್ಟ ಧರಣಿ ನಮ್ಮ ಬೇಡಿಕೆಗಳನ್ನು ಈಡೇರಿವರಿಗೂ ಧರಣಿ ಹೀಗೆ ಮುಂದುವರೆಯುತ್ತದೆ ಹಲವಾರು ಅಧಿಕಾರಿಗಳು ಕೆಲಸ ಮಾಡೋಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಾಸ್ ವಾಸನೆ ಕೊಡುತ್ತೀದ್ದಾರೆ. ನಮಗೂ ಬೇಜಾರಾಗಿದೆ ಇನ್ನು ಮುಂದೆ ಏನಿದ್ದರೂ ಲಿಖಿತ ಮುಖಾಂತರ ಇಷ್ಟು ದಿನದ ಒಳಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಲಿಖಿತ ಕೊಟ್ಟರೆ ಮಾತ್ರ ನಮ್ಮ ಬೇಡಿಕೆ ಈಡೇರುವವರಿಗೂ ಧರಣಿ ಮುಂದುವರಿಸುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಕಾಶೀನಾಥ್ ನಾಟೇಕಾರ ಹೇಳಿದರು.
ಹಲವಾರು ಇಲಾಖೆಗಳು ಭ್ರಷ್ಟಾಚಾರದಿಂದ ಕೂಡಿದ್ದು ಯಾವುದೇ ಸಣ್ಣಪುಟ್ಟ ಕೆಲಸಗಳ ಜನಸಾಮಾನ್ಯರು ತೆಗೆದುಕೊಂಡು ಹೋದರೆ ಲಂಚ ಕೇಳುತ್ತಿದ್ದಾರೆ.
ಕಾಮಗಾರಿ ಮಾಡುವಲ್ಲಿ ಕಳಪೆಯಾಗಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮುಖ ನೋಡಿ ಸಂಸ್ಥೆಗಳಿಗೆ ಹಣ ನೀಡುವಲ್ಲಿ ಭ್ರಷ್ಟಾಚಾರ.
ನಿರ್ಮಿತ ಕೇಂದ್ರಗಳಲ್ಲಿ ಕಳಪೆ ಕಾಮಗಾರಿ ಮಾಡಿ ಸರ್ಕಾರ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ ಕಳ್ಳ ಕೂಡಲೇ ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಮ್ಮಣ್ಣ ಹುಣಸಗಿ ವಲಯದ ಅಧ್ಯಕ್ಷರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ದಪ್ಪ ಚರ್ಮದಿಂದ ಹೊಂದಿದಂತಹ ಕುಂಭಕರ್ಣ ನಿದ್ದೆಯಲ್ಲಿ ಜಾರಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಆಗುವ ಜನಸಾಮಾನ್ಯರ ಕೆಲಸಗಳಿಗೆ ನೇರ ಹೊಣೆ ಅಧಿಕಾರಿಗಳೆಂದು ಮಲ್ಲಿಕಾರ್ಜುನ ಕುರಕುಂದಿ ನೇರವಾಗಿ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.
ಪ್ರತಿಭಟನೆಯಲ್ಲಿ
ಹನುಮಂತ್ ದೊರೆ. ಮಲ್ಲಿಕಾರ್ಜುನ್. ಸಾಯ್ಬಣ್ಣ ಕುರುಕುಂದಿ. ಹೀಗೆ ಅಂಬೇಡ್ಕರ್ ಮರೆಪ್ಪ ಗುರ್ಸಗಿ.
ಸ್ವಾಭಿಮಾನಿ ಸೇನೆಯ ಎಲ್ಲ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ
ಆವಣದಲ್ಲಿ ನಿರಂತರವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ ಶಹಾಪುರ




















