ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೃಹತ್ ಅಹಿಂದ ಸಮಾವೇಶ

ದಾವಣಗೆರೆ/ಹೊನ್ನಾಳಿ:ಶೋಷಿತ ಸಮಾಜದ ಜಾಗೃತಿ, ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಜ.28ರಂದು ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡಿದ್ದು ಅವಳಿ ತಾಲೂಕುಗಳ ಅಹಿಂದನಾಗರಿಕರು ತಪ್ಪದೇ ಭಾಗವಹಿಸಿ ಎಂದು ಅಹಿಂದ ನಾಯಕ, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತಿ ಜನಗಣತಿಯ ಕಾಂತರಾಜ ವರದಿಯಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿಯದಿದ್ದರೂ ಆ ವರದಿಯನ್ನು ತಿರಸ್ಕರಿಬೇಕು ಎಂದು ಸಿಎಂ ಮೇಲೆ ಒತ್ತಡ ಹಾಕುವುದು ಸರಿಯಲ್ಲ,ಮೊದಲು ವರದಿ ಸ್ವೀಕರಿಸಿ ಸಮಗ್ರ ಮಾಹಿತಿ ಪಡೆಯುವುದು ಸರ್ಕಾರದ ಕ್ರಮವಾಗಿದೆ.ವರದಿ ಸ್ವೀಕರಿಸಲು ಒತ್ತಾಯಕ್ಕಾಗಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಶೇ.30ರಷ್ಟು ಇರುವ ಮೇಲ್ವರ್ಗದವರು ಈಚೆಗೆ ದಾವಣಗೆರೆ ನಗರದಲ್ಲಿ ರಾಷ್ಟ್ರೀಯ ಸಮಾವೇಶ ಮಾಡಿ 20 ಸಾವಿರ ಜನರ ಸೇರಿಸಿದ್ದರು.ಶೇ.70ರಷ್ಟು ಅಹಿಂದ ವರ್ಗವಿರುವ ನಾವು ಲಕ್ಷ ಸಂಖ್ಯೆಯಲ್ಲಿ ಸೇರಿಸುವ ಶಕ್ತಿ ನಮಗಿದೆ ಅಹಿಂದ ವರ್ಗ ಒಂದಾಗಿ ಹೋರಾಡಿಸಿಎಂ ಕೈ ಬಲಪಡಿಸಿದರೆ ವರದಿ ಸ್ವೀಕಾರ ಹಾಗೂ ಅನುಷ್ಠಾನಕ್ಕೆ ಸಹಾಯವಾಗುತ್ತದೆ ಎಂದರು.
ಅಹಿಂದ ತಾಲೂಕು ಅಧ್ಯಕ್ಷ ಡಾ.ಈಶ್ವರನಾಯ್ಕ ಮಾತನಾಡಿ ಜಾತಿಜನಗಣತಿಗಾಗಿ ಸರ್ಕಾರ 160 ಕೋಟಿ ವೆಚ್ಚ ಮಾಡಿದ್ದು ಇದು ಸಾರ್ವಜನಿಕರ ಹಣ ಇಂತಹ ವರದಿ ಕೈ ಬಿಡುವ ಹುನ್ನಾರ ಸರಿಯಲ್ಲ ಎಂದರು.
ಅಹಿಂದ ಮುಖಂಡ ಬಿ.ಸಿದ್ದಪ್ಪ ಮಾತನಾಡಿದರು. ರುದ್ರಮುನಿ,ವೀರೇಶನಾಯ್ಕ,ಡಿ.ಬಸವರಾಜ್, ಶಿವಕುಮಾರ್‌ ಒಡೆಯರ್,ಎಚ್.ಎ.ಉಮಾಪತಿ ಜ.28ರಂದು ನಡೆಯುವ ಅಹಿಂದ ಸಮಾವೇಶಕ್ಕೆ ತೆರಳಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ಅಹಿಂದ ವರ್ಗದ ಜನರು ಭಾಗವಹಿಸಿ ಸಮಾವೇಶ ಯಶಸ್ವಿಗಳಿಸಬೇಕೆಂದು ಮನವಿ ಮಾಡಿದರು.ಅಹಿಂದ ಮುಂಖಂಡರಾದ ಎಚ್.ಬಿ.ಶಿವಯೋಗಿ,
ಜಗನ್ನಾಥ್‌,ಶಿವಾನಂದಪ್ಪ,ಪಾಲಾಕ್ಷಪ್ಪ,ಜಿಎಚ್ ತಮ್ಮಣ್ಣ,ವಾಸಪ್ಪ,ಮಾಜಿ ಸೈನಿಕರು ದಿಡಗೂರುಪಾಲಾಕ್ಷಪ್ಪ,ಹನುಮಂತಪ್ಪ ಇತರರಿದ್ದರು. ಅಹಿಂದಯುವಮುಖಂಡ ಎಸ್.ಎಸ್.ಶ್ರೀನಿವಾಸ್ ಸ್ವಾಗತಿಸಿದರು

ವರದಿ-ಪ್ರಭಾಕರ ಡಿ.ಎಮ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ