ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಜಾತಿಗೆ ಸಾವಿದೆ ಆದರೆ ಸಂವಿಧಾನಕ್ಕೆ ಸಾವಿಲ್ಲ”

ಸಂವಿಧಾನ ಜಾಗೃತಿ ಜಾಥಾ ಯಶಸ್ವಿ

ಲಿಂಗಸುಗೂರು ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಫೆಬ್ರುವರಿ 11 ಭಾನುವಾರ ರಾತ್ರಿ 9:00 ಗಂಟೆಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಶಾಲಾ ಮಕ್ಕಳು,ಶಿಕ್ಷಕರು,ಸರಕಾರಿ ನೌಕರರು, ಸಾರ್ವಜನಿಕರು ತಾಲೂಕಿನ ದಲಿತ ಮುಖಂಡರು ಸಂವಿಧಾನ ಜಾಥಾಕ್ಕೆ ಅದ್ದೂರಿಯಾಗಿ ಸ್ವಾಗತಿಸಿದರು. ಅದರಲ್ಲೂ ಮಕ್ಕಳಂತೂ ಕುಂಭಗಳನ್ನು ಹೊತ್ತು ಲಂಬಾಣಿ ಶೈಲಿಯ ಉಡುಪುಗಳನ್ನು ತೊಟ್ಟು ಲಕ್ಷ್ಮಿ ಗುಡಿಯಿಂದ ಗಡಿಯಾರ ಚೌಕದವರಿಗೆ ಮೆರವಣಿಗೆ ಮುಖಾಂತರ ಈ ಅರ್ಥಪೂರ್ಣ ಜಾಥಾಕ್ಕೆ ಮೆರುಗು ತಂದರು.ಗಡಿಯಾರ ಚೌಕದ ಹತ್ತಿರ ಸಾವಿರಾರು ಜನರ ನಡುವೆ ಸಂವಿಧಾನ ಜಾತದ ಬಹಿರಂಗ ಸಭೆ ನಡೆಯಿತು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಈ ಸಂವಿಧಾನ ಜಾಥಾದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ್ ರಾಯನಗೌಡ ರೆಡ್ಡಿ, ಬಿಇಓ ಹುಂಬಣ್ಣ ರಾಥೋಡ್,ಸಮಾಜ ಕಲ್ಯಾಣ ಅಧಿಕಾರಿಗಳು ಎಲ್ಲಾ ಸರ್ಕಾರಿ ನೌಕರರು ಹಾಗೂ ತಾಲೂಕಿನ ದಲಿತ ಮುಖಂಡರಾದ ನಿಂಗಪ್ಪ ಪರಂಗಿ, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಮುರಾಜಿ,ಸಿದ್ದಪ್ಪ ಪರಂಗಿ,ಕುಪ್ಪಣ್ಣ ಹೊಸಮನಿ,ಸಂಜೀವಪ್ಪ ಹುನಕುಂಟಿ,ಶಿವಣ್ಣ ಪರಂಗಿ,ಚಿದಾನಂದ ಚಲವಾದಿ, ಪ್ರಭುಲಿಂಗ ಮೇಗಳ ಮನಿ,ಮೋಹನ್ ಗೋಸ್ಲಿ ಮುಂತಾದ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ವರದಿ ಬಸವರಾಜ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ