ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಮನಸೆಳೆದ ಕಲಾ ಉತ್ಸವ: ಪ್ರತಿಭೆ ಸಾಬೀತು ಪಡಿಸಿದ ಕಲಾವಿದರು
ಕಣ್ಣಿಲ್ಲದವರು ಅಂತಃ ದೃಷ್ಟಿಯಿಂದ ಜಗತ್ತು ನೋಡುತ್ತಾರೆ: ವೆಂಕಟೇಶ್ ಅಮರಜ್ಯೋತಿ


ಗಂಗಾವತಿ: ಜಗತ್ತನ್ನು ನೋಡದಿದ್ದರೂ ಜಗದ ಆಗು ಹೋಗುಗಳನ್ನು ಅಂತಃ ದೃಷ್ಟಿಯಿಂದ ನೋಡುವ ಶಕ್ತಿ ಅಂಧ ಪ್ರತಿಭೆಗಳಿಗೆ ಇರುತ್ತದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಕೊಪ್ಪಳ ಜಿಲ್ಲಾಧ್ಯಕ್ಷ ವೆಂಕಟೇಶ್ ಅಮರಜ್ಯೋತಿ ಹೇಳಿದರು.
ಅವರು ನಗರದ ಖಾಸಗಿ ಹೊಟೇಲ್‌ಲ್ಲಿ ಶ್ರೀಕುಮಾರೇಶ್ವರ ಸಂಗೀತ ಮತ್ತು ಲಲಿತಾ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಲಾಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಡಿತ್ ಗೋವಿಂದ ಬೊಮ್ಮಲಾಪುರ ಇವರ ದ್ವಿತೀಯ ಸ್ಮರಣೋತ್ಸವದ ಅಂಗವಾಗಿ ನಡೆಸಲಾಗುತ್ತೀರುವ ಈ ಕಾರ್ಯಕ್ರಮ ಅವಿಸ್ಮರಣೀಯ ಈ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಲಿ ನಮ್ಮ ಸಂಗೀತ ಪರಂಪರೆ ಮುಂದುವರೆಯಲಿ ಎಂದು ಕಿವಿಮಾತು ಹೇಳಿದರು.
ಬಿಜಪಿ ಮುಖಂಡ ಶ್ರವಣ ಕುಮಾರ ರಾಯ್ಕರ್ ಮಾತನಾಡಿ, ಸಾಂಸ್ಕೃತಿಕ ಕಲಾ ಮೇಳದ ಮೂಲಕ ಹಿಂದೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು ಆ ಮೂಲಕ ಬತ್ತದ ಕಣಜವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಲೇತ್ನಿಸಿದೆವು ಎಂದು ತಮ್ಮ ಗತ ದಿನಗಳನ್ನು ನೆನದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಕಲಾವಿದ ನಾಗರಾಜ್ ಇಂಗಳಗಿ ಮಾತನಾಡಿ, ಸಂಗೀತಕ್ಕೆ ಕುಣಿಸುವ, ತಣಿಸುವ, ಅಳಿಸುವ, ನಗಿಸುವ, ದಣಿಸುವ ಶಕ್ತಿಯಿದೆ. ಮಳೆ ತರಿಸಿದ ಉದಾಹರಣಗಳು ಇತಿಹಾಸದಿಂದ ಗೊತ್ತಾಗುತ್ತವೆ ಎಂದರು.
ಸಮರ್ಥವಾಣಿ ಪತ್ರಿಕೆಯ ಉಪಸಂಪಾದಕ ಹರೀಷ್ ಕುಲಕರ್ಣಿ ಮಾತನಾಡಿ, ಆನೆಗೊಂದಿ ರಸ್ತೆಯ ದೇವಘಾಟ್ ರಸ್ತೆಯ ಮುಂದೆ ಶ್ರೀಪುಟ್ಟರಾಜ ಕವಿಗವಾಯಿಗಳ ವೃತ್ತ ನಿರ್ಮಾಣಕ್ಕೆ ಸಂಬAಧಿಸಿದAತೆ ಕಾನೂನು ರೀತಿಯ ಪ್ರಕ್ರಿಯೆಗಳು ನಡೆಯುತ್ತಿವೆ ಎಲ್ಲರೂ ಕೈಜೋಡಿಸಿ ಉತ್ತಮ ವೃತ್ತ ಮಾಡೋಣ ಎಂದು ತಿಳಿಸಿದರು.
ಸಾಧಕರಾದ ವೆಂಕಟಣ್ಣ ಚಿತ್ರಗಾರ್, ಶ್ರೀನಿವಾಸ್ ಕಸಬೆ, ಪ್ರಕಾಶ್ ಪಾಟೀಲ್, ಮಾರೆಪ್ಪ ಪಟ್ಟಣ ಸೆರಗು, ಶ್ರೀನಿವಾಸ್ ಉಪ್ಪಾರ್, ಅಕ್ಬರ್ ಸಾಬ್, ಸಂದೇಶ್ ಹಿರೇಮಠ, ಲಿಂಗರಾಜ್ ಜಾಲವಾಡಗಿ ಹಾಗು ಕೇಶವ ನಾಯಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಮನೋರಮಾ ಗೋವಿಂದರಾಜ್ ಇವರು ಪಂ.ಗೋವಿAದರಾಜ್ ಬೊಮ್ಮಲಾಪುರ ಇವರ ಭಾವಚಿತ್ರಕ್ಕೆ ಪುಷ್ಪರ್ಪಣೆ ಮಾಡಿದರು. ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹ್ಮದ್ ರಫಿ ಇದ್ದರು. ಪಂಚಾಕ್ಷರಿ ಬೊಮ್ಮಲಾಪುರ ನಿರೂಪಿಸಿದರು. ಬಳಿಕ ಅನೇಕ ಕಲಾವಿದರು ಸಂಗೀತದ ರಸದೌತಣ ಉಣಬಡಿಸಿದರು. ತಮ್ಮ ಪ್ರತಿಭೆ ಸಾಬೀತು ಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ