ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ


ಹನೂರು :ತಾಲ್ಲೂಕಿನ ನಾಗನತ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಹನೂರಿನ ತಹಸಿಲ್ದಾರ್ ಗ್ರೇಡ್ 2 ರವರಾದ ಕೆ ಧನಂಜಯ್ ರವರ ನೇತೃತ್ವದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ತಹಶೀಲ್ದಾರ್ (ಗ್ರೇಡ್ 2) ರವರಾದ ಕೆ ಧನಂಜಯ್ ರವರು ಸಾಮಾಜಿಕ ಭದ್ರ ಯೋಜನೆ ಅಡಿ ಪಿಂಚಣಿಯನ್ನು ನೀಡಲಾಗುತ್ತದೆ, ಅಂಗವಿಕಲರಿಗೆ,ಇಂದಿರಾ ಗಾಂಧಿ ಪಿಂಚಣಿ ಯೋಜನೆ,ಮನಸ್ವಿನಿ ಪಿಂಚಣಿ ಯೋಜನೆ, ವೃದ್ಧರಿಗೆ ಪಿಂಚಣಿ ಇರುತ್ತದೆ.
60 ವರ್ಷ ಮೇಲ್ಪಟ್ಟ ವೃದ್ಧರಿಗೆ 800ರೂ ಪ್ರತಿ ಮಾಸಿಕ ಸಿಗುತ್ತದೆ.65 ವರ್ಷ ಮೇಲ್ಪಟ್ಟವರಿಗೆ 1200ರು ಪಿಂಚಣಿ ಸಿಗುತ್ತದೆ.ಅಂಗವಿಕಲರಿಗೆ 45% ರವರಿಗೆ 800 ರೂ,75% ರವರಿಗೆ 1400 ರೂ ಮಾಸಿಕ ಸಿಗುತ್ತದೆ. ಸಂದ್ಯಾ ಸುರಕ್ಷಾ ಯೋಜನೆ ಅಡಿ 65 ವರ್ಷ ಮೇಲ್ಪಟ್ಟವರಿಗೆ 1200 ರೂ ಪಿಂಚಣಿ ಸಿಗುತ್ತದೆ.
ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಹನೂರಿನಿಂದ ನಾಗನತ್ತದವರೆಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ರಸ್ತೆಯಲ್ಲಿ ಮಧ್ಯೆ ಇರುವ ಹಳ್ಳವನ್ನ ಸರಿಪಡುಸಿವಂತೆ ಮನವಿ ಮಾಡಿದರು.
ಇದೆ ವೇಳೆ ಪಿಂಚಣಿ ಬಾರದ ವೃದ್ದರಿಂದ 20 ಅರ್ಜಿಗಳನ್ನು ಸ್ವೀಕರಿಸಿದರು.
ಇದೆ ಸಂದರ್ಭದಲ್ಲಿ ಮಾದೇಶ್ ,ಗ್ರಾ.ಪಂ.ಅಧ್ಯಕ್ಷರು ಶ್ರೀಮತಿ ಮಂಜುಳಾ ಪ್ರಭುಸ್ವಾಮಿ,ಗ್ರಾ.ಪಂ ಸದ್ಯಸರು ಜಯಮ್ಮ ಹಾಗೂ ಊರಿನ ಮುಖಂಡರಾದ ಮಾದೇವ,ಗುರುಸ್ವಾಮಿ ಮುಖ್ಯಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
-ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ