ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸುಳ್ಳು ಮತ್ತು ಸತ್ಯ !

ಯಾವ ಸಂಗತಿಯೂ ಇದ್ದದ್ದು ಇದ್ದ ಹಾಗೆ ಕಾಣುವುದಿಲ್ಲ.ನಾವು ಅದಕ್ಕೆ ನಮ್ಮದೇ ಆದ ಬಣ್ಣ ಹಚ್ಚಿಯೇ ನೋಡುತ್ತೇವೆ.ವಾಸ್ತವವಾಗಿ ಬಣ್ಣ ಕನ್ನಡಕದ್ದು,ಕಾಣುವುದು ವಸ್ತುವಿನಲ್ಲಿ.

ವಿಮಾನದಲ್ಲಿ ಹಾರುವವನು ಕೆಳಗೆ ಕಂಡಾಗ ಮನೆಗಳೆಲ್ಲ ಬೆಂಕಿಪೆಟ್ಟಿಗೆಗಳಂತೆ ಕಾಣುತ್ತದೆ. ನೆಲದಲ್ಲಿ ನಿಂತು ಮೇಲೆ ಕಂಡಾಗ ವಿಮಾನ ಹಕ್ಕಿಯ ಗಾತ್ರದಲ್ಲಿ ಕಾಣಿಸುತ್ತದೆ.
ಇದ್ದಂತೆ ಕಾಣುವುದಿಲ್ಲ,ಕಂಡಂತೆ ಇರುವುದಿಲ್ಲ.
ನಮ್ಮದು ಸತ್ಯ ಹೌದು,ಆದರೆ ನಮ್ಮದೇ ಸತ್ಯ ಅಲ್ಲ. ಇಷ್ಟು ವಿವೇಕ ಮೂಡಿದರೆ ಜಗಳ ಸುಲಭವಾಗಿ ಪರಿಹಾರವಾಗಿಬಿಡುತ್ತದೆ.

ನಾವು ಕಂಡದ್ದು ಸುಳ್ಳಲ್ಲ,ಆದರೆ ನಮ್ಮ ಕನ್ನಡಕದ ಬಣ್ಣ ಅದರಲ್ಲಿ ಕಂಡಿದೆ,ಪ್ರತಿಯೊಬ್ಬರ ಕನ್ನಡಕಕ್ಕೂ ಅವರವರದ್ದೇ ಬಣ್ಣ,ದಿಣ್ಣ.
ಕನ್ನಡಕ ತೆಗೆದು ನೋಡಲು ಕಲಿಯಬೇಕು.

ಕೆಲವರಿಗೆ ಕನ್ನಡಕ ಕಳಚಿಬಿಟ್ಟರೆ ಒಳಗೆ ಕಣ್ಣೇ ಇರುವುದಿಲ್ಲ,ಮುಖವಾಡ ಕಳಚಿಬಿಟ್ಟರೆ ಒಳಗೆ ಮುಖವೇ ಇರುವುದಿಲ್ಲ.
ಬರಹ‌- ಈ.ಶಿವರಾಜ್ ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ