ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಕ್ಷಾ ಬಂಧನ…ಸ್ನೇಹ ಪ್ರೀತಿಗಿಂತ ಮಿಗಿಲಾದದ್ದು

ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನ
ಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣ
ಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನ
ಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ

ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನು
ಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನು
ತವರಿಗೆ ಖುಷಿಯಲಿ ಬರುವ ಸಹೋದರಿಯರ ಕಂಡೆನು
ಅವರ ಕರುಣೆ ಮಮತೆ ಕಾಳಜಿಗೆ ನಾ ಮೌನಿಯಾದೆನು

ರಾಖಿಯ ಕಟ್ಟುವ ಆ ಸುಮಧುರ ಘಳಿಗೆಯಲಿ
ತಾಯಿಯ ಕಾಣುವೆವು ಸಹೋದರಿಯ ಮುಖದಲಿ
ಸಂಬಂಧದ ಜವಾಬ್ದಾರಿ ಹೆಚ್ಚಿಸಿದರು ಪುರುಷರಲಿ
ಪಾದ ಸ್ಪರ್ಶಿಸಿ ಋಣಮುಟ್ಟಿಸುವೆನೆಂದು ಬೇಡಿರಿ ಅಕ್ಕ ತಂಗಿಯರಲಿ

ತವರಿಗೆ ಓಡೋಡಿ ಬಂದಾಗ ತೋರಿಸಿ ಕನಿಕರ
ಕಷ್ಟದಲ್ಲಿರುವ ಸಹೋದರಿಯರಿಗಿರಲಿ ನಿಮ್ಮ ಪ್ರೀತಿ ಮಮಕಾರ
ಭೂಲೋಕದ ಪವಿತ್ರವಾದ ಸಂಬಂಧ ಸಹೋದರಿ-ಸಹೋದರ
ಸೂರ್ಯ ಚಂದ್ರರಂತೆ ನಾವೆಂದಿಗೂ ಅಜರಾಮರ

ಹಣೆಗೆ ಕುಂಕುಮವಿಟ್ಟು ನನಗೆ ಕಾವಲಿರು ಎಂದವಳು
ನೀನೇ ನನ್ನ ಬದುಕಿನ ಶ್ರೀರಕ್ಷೆಯೆಂದು ರಾಖಿ ಕಟ್ಟಿದಳು
ತಬ್ಬಿಕೊಂಡು ನನ್ನನ್ನು ತಬ್ಬಲಿ ಮಾಡಬೇಡ ಎಂದಳು
ಸಿಹಿಯ ತಿನಿಸಿ ನಿನ್ನ ಬಾಳು ಸಿಹಿಯಾಗಿರಲೆಂದು ಹರಸಿದಳು

-ಶ್ರೀ ಮುತ್ತು.ಯ.ವಡ್ಡರ,(ಶಿಕ್ಷಕರು)ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ ,ಬಾಗಲಕೋಟ
9845568484

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ