ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಏನೂ ಇಲ್ಲ ಅಂದ್ರೂ, ರಾಜೀನಾಮೆ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶೇಕ್ ಮೊಸೀನ್ ಪ್ರಶ್ನಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದಲಿತ ರಾಜಕಾರಣಿ ಒಬ್ಬರು ರಾಜಕಾರಣದಲ್ಲಿ ಎತ್ತರ ಮಟ್ಟಕ್ಕೆ ಬೆಳೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಯಾವ ತಪ್ಪು ಮಾಡಿಲ್ಲ ಅಂತಾನೆ ಅವರೇ ಸ್ವತ ಪ್ರಕರಣದ ಸಮಗ್ರ ತನಿಕೆ ನಡೆಸಲು ಕೋರಿದ್ದಾರೆ. ಆದರೆ ಬಿಜೆಪಿ ಅವರಿಗೆ ಮಾತ್ರ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಬೆಳೆಯಬಾರದು ಎಂದು ತುಳಿಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತಿಚೆಗೆ ಬಿಜೆಪಿಯ ಕೆಲ ರಾಜಕಾರಣಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಪರ ನಿಂತಿದ್ದಾರೆ. ಕೆಲ ರಾಜಕಾರಣಿಗಳು ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಆದರೆ ಅವರ ಪರ ಬಿಜೆಪಿಯ ರಾಜಕಾರಣಿಗಳು ನಿಂತ ಸಲುವಾಗಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಸತ್ಯ ಬೇಕಿಲ್ಲ. ಸುಳ್ಳನ್ನೇ ಸತ್ಯ ಎಂದು ಹೇಳಿ ರಾಜೀನಾಮೆ ಕೇಳಿತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಇಡೀ ರಾಜ್ಯ ಅಲ್ಲದೇ ದೇಶದಲ್ಲಿ ಬೆಳೆಯುವ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರನ್ನು ಸಿಲುಕಿಸಲು ಬಿಜೆಪಿಯವರು ಏನೇಲ್ಲ ಪ್ರಯತ್ನ ಪಟ್ಟರೂ ಸಹಿತ ಅದು ನಿಜವಾಗುವುದಿಲ್ಲ. ನೀವು ಎಷ್ಟೇ ಅವರನ್ನು ತುಳಿಯಲು ಪ್ರಯತ್ನ ಪಟ್ಟರೇ ಅವರು ಬೆಳೆಯುತ್ತಲೇ ಹೋಗುತ್ತಾರೆ ಎಂದು ಹೇಳಿದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ




















