ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಗ್ರರ ನೆಲೆಗಳ ನಾಶ ಬಿಜೆಪಿಯಿಂದ ಸಂಭ್ರಮಾಚರಣೆ

ಬಳ್ಳಾರಿ / ಕಂಪ್ಲಿ : ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಬಿಜೆಪಿ ನಗರ ಘಟಕ ಅಧ್ಯಕ್ಷ ಮುರಳಿ ಮೋಹನ್ ರೆಡ್ಡಿ ಮಾತನಾಡಿ ಕಾಶ್ಮೀರದ ಪೆಹಲ್ಗಮ್ ಗೆ ಪ್ರವಾಸಕ್ಕೆಂದು ತೆರಳಿದ ಪ್ರವಾಸಿಗರ ಮೇಲೆ ಪಾಕಿಸ್ತಾನ ಉಗ್ರರು ನಡೆಸಿದ ನರಮೇದಕ್ಕೆ ಹಿಡಿ ಭಾರತವೇ ದುಃಖ ಪಟ್ಟಿತ್ತು. ಅಲ್ಲದೆ ಎಲ್ಲೆಡೆ ಪ್ರತಿಕಾರದ ಕೂಗಿ ಮುಗಿಲೆದ್ದಿತ್ತು ಭಾರತೀಯ ನಾಗರಿಕರ ಗುಡಿಯಾಗಿಸಿಕೊಂಡು ಅವರ ಪತ್ನಿಯರ ಸಿಂಧೂರ ಅಳಿಸಿದ ಉಗ್ರರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿಯೇ ಪ್ರತಿಕಾರವನ್ನು ಪ್ರತೀಕಾರದ ದಾಳಿಯನ್ನು ಸೇನೆ ನಡೆಸಿ ಪಿಓಕೆ ಯ ಒಂಬತ್ತು ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಉಗ್ರರ ನೆಲೆಗಳನ್ನು ಧ್ವಂಸ ಗೊಳಿಸಿದ್ದು ಇಡೀ ದೇಶವೇ ಖುಷಿಪಡುವ ವಿಚಾರವಾಗಿದೆ ಈ ಮೂಲಕ ನರೇಂದ್ರ ಮೋದಿಜಿಯವರು ಉಗ್ರರನ್ನು ಮಟ್ಟ ಹಾಕಲು ಇರಿಸಿದ ದಿಟ್ಟ ಹೆಜ್ಜೆ ಭಯೋತ್ಪಾದಕತೆಯನ್ನು ಹಾಗೂ ಉಗ್ರವಾದವನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ ಎಂದರು. ಬಳಿಕ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎನ್. ರಾಮಾಂಜನೇಯಲು, ಟಿ.ವಿ. ಸುದರ್ಶನರೆಡ್ಡಿ, ಆರ್. ಆಂಜನೇಯ, ಹೂಗಾರ್ ರಮೇಶ, ಪ್ರಮುಖರಾದ ಬಿ. ಬ್ರಹ್ಮಯ್ಯ, ಭಾಸ್ಕರ ರೆಡ್ಡಿ, ಎಂ. ಚಂದ್ರಕಾಂತ ರೆಡ್ಡಿ, ಡಿ. ಶ್ರೀಧರ ಶೆಟ್ಟಿ, ಅಗಳಿ ಪಂಪಾಪತಿ, ಡಿ. ದೇವೇಂದ್ರ, ಜೆ ಶ್ರೀನಿವಾಸ ಸತ್ಯನಾರಾಯಣ ಶೆಟ್ಟಿ, ಯು. ಎಂ. ವಿದ್ಯಾಶಂಕರ, ಶರಣಪ್ಪ, ವಿರುಪಾಕ್ಷಿ ಸೇರಿದಂತೆ ಬಿಜೆಪಿ ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ