ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಲು ಜಾರಿ ಬಾವಿಯಲ್ಲಿ ಬಿದ್ದು ಇಬ್ಬರು ಯುವತಿಯರ ಸಾವು

ಯಾದಗಿರಿ/ ಮೋಟ್ನಳ್ಳಿ: ನಿನ್ನೆ ಮೇ.15. ಮೋಟ್ನಳ್ಳಿ ಗ್ರಾಮದ ಇಬ್ಬರು ಯುವತಿಯರು ಬಟ್ಟೆ ತೊಳೆಯಲು ಬಾವಿಗೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಈಜು ಬಾರದೆ ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಮೃತರನ್ನು ವಸಂತಮ್ಮ ತಂದೆ ಲಕ್ಷ್ಮಣ (ಲಚಮಪ್ಪ), 18ವರ್ಷ, ಮೊಟ್ನಳ್ಳಿ ಗ್ರಾಮ, ತಾ॥ಜಿ॥ ಯಾದಗಿರ ಮತ್ತು ಇನ್ನೋರ್ವ ಯುವತಿ ನೆರೆಯ ತೆಲಂಗಾಣ ರಾಜ್ಯದ ಗೋಟಿಲಾ ತಾ॥ ತಾಂಡೂರು ಮೂಲದ ಕು. ನವಿತಾ ತಂದೆ ಮಾಣಿಕಪ್ಪ 16 ವರ್ಷದವರು ಎನ್ನಲಾಗಿದೆ.

ಮೋಟ್ನಳ್ಳಿ ಗ್ರಾಮದ ಸೀಮಾಂತರದಲ್ಲಿರುವ ಹಣಮಂತ್ರಾಯ ವಕೀಲರಿಗೆ ಸೇರಿದ ಬಾವಿಗೆ ಬಟ್ಟೆ ತೊಳೆಯಲು ಹೋಗಿದ್ದರು. ಸುಮಾರು ಸಮಯ ಕಳೆದರೂ ಬಾರದ ಕಾರಣ ಬಾವಿ ಹತ್ತಿರ ನೋಡಿದಾಗ ಅವರ ಬಟ್ಟೆ,ಪಾದರಕ್ಷೆ ಮಾತ್ರ ಸಿಕ್ಕಿರುತ್ತದೆ, ಅನುಮಾನಗೊಂಡು ಬಾವಿಯಲ್ಲಿ ಇಳಿದು ಹುಡುಕಾಡಿದಾಗ ಇಬ್ಬರ ಮೃತದೇಹಗಳು ಬಾವಿಯಲ್ಲಿ ಸಿಕ್ಕಿರುತ್ತವೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಜಗದೀಶ್ ಕುಮಾರ್ ಭೂಮಾ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ