ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣರವರ ನೇತ್ರತ್ವದಲ್ಲಿ ಪೃಥೇಶ್ವರ ದುರುಗಪ್ಪರವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಸಂಘಟನೆಯ ನೂತನ ಕೊಟ್ಟೂರು ತಾಲೂಕು ಸಂಚಾಲಕರನ್ನಾಗಿ ಹಸಿರು ಶಾಲು ಹಾಕುವುದರ ಮೂಲಕ ಅಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣ ಮಾತನಾಡಿ ನೂತನ ಸಂಚಾಲಕರು ಯಾವುದೇ ಪಕ್ಷ ಜಾತಿ ಧರ್ಮ ಎನ್ನದೆ ತಾಲೂಕಿನ ಪ್ರತಿಯೊಬ್ಬ ರೈತರಿಗೆ ಕಷ್ಟಕ್ಕೆ ಸ್ಪಂದಿಸಿ ನ್ಯಾಯ ಕೊಡಿಸುವಂತಹ ಪ್ರಾಮಾಣಿಕ ವ್ಯಕ್ತಿಯಾಗಬೇಕು, ಸಂಘಟನೆಯನ್ನು ಮುಂದುವರಿಸಿಕೊಂಡು ಹೋಗಬೇಕು ಹಾಗೂ ಸಂಘಟನೆಗಾಗಲಿ ಅಥವಾ ರೈತರಿಗಾಗಲಿ ಧಕ್ಕೆ ಬರುವಂತಹ ಕೆಲಸಗಳನ್ನು ಮಾಡಬಾರದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗರಾಜ್, ಎ ಎಂ, ಕೊಟ್ರಯ್ಯ ಕೊಟ್ಟೂರೇಶ್ವರ ಮಠದ ಸಹಾಯಕ ಧರ್ಮಕರ್ತರು, ಕೆ, ತೋಪ್ರಾಜ್ ಚಪ್ಪರದಳ್ಳಿ ಉಪಸ್ಥಿತರಿದ್ದರು.
ವರದಿ ಶಶಾಂಕ್ ಪಿ
