ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಧನೆಗಳ ಪ್ರಶಸ್ತಿ ಪಡೆದ ತೋಟದ ಮನೆ ಮಾರುತಿ ಗೆ ಹ್ಯಾಳ್ಯ ಗ್ರಾಮದಲ್ಲಿ ಸನ್ಮಾನ ಸಮಾರಂಭ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ತೋಟದ ಮನೆ ಮಾರುತಿ ರವರು ಸಾಧನೆಗಳು ಮಾಡಿದ ಇವರನ್ನು ಗುರುತಿಸಿ ದಿ. 28-5-2025 ರಂದು ನೆಡೆದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ನಯನ ಸಭಾಂಗಣದಲ್ಲಿ ಪ್ರಜಾಹಿತ ಸಂರಕ್ಷಣಾ ಚಾರಿಟಬಲ್ ಟ್ರಸ್ಟ್ (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಮತ್ತಷ್ಟು ಸೇವೆ ಈ ನಾಡಿಗೆ ದೊರಕಲಿ ಎಂದು ಅಶಿಸುತ್ತಾ ಇವರಿಗೆ “ಪ್ರಗತಿಪರ ಮಾದರಿ ರೈತ” ಪ್ರಶಸ್ತಿ ನೀಡಲಾಗಿದ್ದು ಮತ್ತು ಕರ್ನಾಟಕ ಮೀಡಿಯಾ ಕ್ರಿಯೇಶನ್ಸ್ ಪ್ರಜಾಹಿತ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇವರಿಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಹಾಗೂ ಶಿಕ್ಷಣ, ಕ್ರೀಡೆ, ರಂಗಭೂಮಿ, ಕ್ಷೇತ್ರಗಳಲ್ಲಿನ ಸಾಧಕರಿಗೆ “ಸುವರ್ಣ ಕಲಾರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅಯೋಜಿಸಿದ್ದ, ಈ ಕಾರ್ಯಕ್ರಮದಲ್ಲಿ ” ಸುವರ್ಣ ಕಲಾರತ್ನ ಪ್ರಶಸ್ತಿ ನೀಡಲಾಗಿದ್ದು,

ಮತ್ತು ಪ್ರಜಾಹಿತ ಸಂರಕ್ಷಣಾ ಚಾರಿಟಬಲ್ ಟ್ರಸ್ಟ್ (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಮತ್ತಷ್ಟು ಸೇವೆ ಈ ನಾಡಿಗೆ ದೊರಕಲಿ ಎಂದು ಅಶಿಸುತ್ತಾ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್” ಪ್ರಶಸ್ತಿ ನೀಡಲಾಗಿದ್ದು.

ಬೆಂಗಳೂರಿನಲ್ಲಿ 28-5-2025 ರಂದು ನೆಡೆದ ಕಾರ್ಯಕ್ರಮಗಳಲ್ಲಿ ಈ ಪ್ರಶಸ್ತಿಗಳು ಪಡೆದ ನಿಮಿತ್ಯ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವಿಜಯನಗರ ಜಿಲ್ಲೆ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕು ಪಧಾದಿಕಾರಿಗಳ ವತಿಯಿಂದ ಗೌರವ ಪ್ರಯುಕ್ತವಾಗಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಹ್ಯಾಳ್ಯ ಗ್ರಾಮದ ಬಡಕುಟುಂಬದಲ್ಲಿ ಬೆಳೆದು, ಸಾಧನೆ ಮಾಡಿದ ತೋಟದ ಶಿವಜ್ಜನ ಮಗ ತೋಟದ ಮನೆ ಮಾರುತಿ ರವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವಿಜಯನಗರ ಜಿಲ್ಲೆ ಅಧ್ಯಕ್ಷರಾದ ಶ್ರೀ ಡಾ. ಡಿ ರಮೇಶ್, ಅಂಚಿನಮನೆ ವಿಜಯನಗರ ರವರು.ಹಾಗೂ ಹಗರಿಬೋಮ್ಮನಹಳ್ಳಿ ತಾಲೂಕು ಅದ್ಯಕ್ಷರಾದ ಡಾ,ಡಿ ಉಮಾಶಂಕರ್ ವಕೀಲರು ಹಾಗೂ ಗ್ರಾಮಸ್ಥರು , ಗೌರವ ಪ್ರಯುಕ್ತವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತೋಟದ ಮನೆ ಶಿವಜ್ಜ, ಡಾ. ಮಹಾಬಲೇಶ್ವರಪ್ಪ ರಿಟೈರ್ಡ್ ಪ್ರೊಫೆಸರು ಕೊಟ್ಟೂರು , ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎನ್ ಭರ್ಮಣ್ಣ, ತಾಲೂಕು ಅಧ್ಯಕ್ಷರಾದ ಶ್ರೀಧರ, ಕೊಟ್ರಯ್ಯಸ್ವಾಮಿ, ಗ್ರಾಮಸ್ಥರಾದ ವೃಷಭೇಂದ್ರಪ್ಪ, ನೀಲಪ್ಪ, ಹಡಗಲಿ ಬಸವರಾಜಪ್ಪ, ಕೋನಪುರ ಚಕೀರಪ್ಪ, ಶಿವನಂಯ್ಯ, ಟಿ ಭೀಮಪ್ಪ ನಿವೃತ್ತ ಶಿಕ್ಷಕರು, ಟಿ ಮಾಂತೇಶ್, ಬಾಣಿಕೇರಿ ಕೊಟ್ರೇಶ್,ಗದ್ಗಳ್ಳಿ ವಾಸುದೇವ,ಟಿ ಪರುಸಪ್ಪ ಹಾಗೂ ಊರಿನ ಗುರುಹಿರಿಯರು ಇತರರು ಇದ್ದರು.

ವರದಿ ಶಶಾಂಕ್ ಪಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ