ಅಕ್ರಮ ಗೋವು ಸಾಗಾಣಿಕೆ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ – ವೀರಣ್ಣ ದೊಡ್ಡಮನಿ
ಯಾದಗಿರಿ/ಗುರುಮಠಕಲ್ : ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಗೋಹತ್ಯೆ ಮತ್ತು ಅಕ್ರಮ ಗೋ ಸಾಗಾಣಿಕೆ ನಡೆಯುತ್ತಿದ್ದು, ಬಕ್ರೀದ್ ಹಬ್ಬದಲ್ಲಿ ಅಕ್ರಮ ಗೋವುಗಳನ್ನು ವಧೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿದರೂ, ತಾಲೂಕಿನಾದ್ಯಂತ ದಿನನಿತ್ಯ ಅಕ್ರಮ ಗೋವುಗಳ ಸಾಗಾಟ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಹೆಚ್ಚು ಅಕ್ರಮ ಗೋವುಗಳನ್ನು ಸಾಗಿಸಲಾಗಿದೆ.
ಇಲ್ಲಿನ ಪೊಲೀಸ್ ಇಲಾಖೆ ತನಿಖೆ ತಂಡಗಳಾಗಿ ಬೇರೆ ಬೇರೆ ಕಡೆ ವಾಹನಗಳ ತಪಾಸಣೆ ಮಾಡುತ್ತಿದ್ದರೂ ಸಹ ಗುರುಮಠಕಲ್ ಪಟ್ಟಣದ ಒಳಗೆ ಹಾಗೂ ಸಮೀಪದ ಗ್ರಾಮಗಳಿಗೆ ಗೋವುಗಳ ಸಾಗಾಟ ನಡೆಯುತ್ತಿರುವುದನ್ನು ತಡೆದು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಶ್ರೀನಿವಾಸ ಯಾದವ್ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಗುರುಮಠಕಲ್ ಆಗ್ರಹಿಸಿದ್ದಾರೆ.
ವಿಶೇಷವಾಗಿ ಸುಮಾರು ವರ್ಷಗಳಿಂದ ಗುರುಮಠಕಲ್ ಪಟ್ಟಣದಲ್ಲಿ ಸೋಮವಾರ ಪಶುಗಳ ಸಂತೆ ನಡೆಯುತ್ತದೆ ಅಲ್ಲಿಂದ ಸ್ಥಳೀಯ ವ್ಯಕ್ತಿಗಳು ಕಾನೂನು ವಿರುದ್ದವಾಗಿ ಅಕ್ರಮ ಗೋಸಾಗಾಣಿಕೆ ಮಾಡುತ್ತಿರುವುದು, ಸರಕಾರದ ಆದೇಶ ಪಾಲನೆ ಮಾಡದಿರುವವರ ವಿರುದ್ದ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ವೀರಣ್ಣ ದೊಡ್ಡಮನಿ ಗುರುಮಠಕಲ್ ಆರಕ್ಷಕ ನಿರೀಕ್ಷಕರು ಇವರು ಭರವಸೆ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
