ಚಾಮರಾಜನಗರ /ಹನೂರು: ಆಕಸ್ಮಿಕ ಬೆಂಕಿಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಹನೂರು ತಾಲೂಕಿನ ಪಿ ಜಿ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪಿ ಜಿ ಪಾಳ್ಯ ಗ್ರಾಮದ ಉಮಾಪತಿ ಈತನ ಸಹೋದರ ಸುರೇಶ್ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಉಮಾಪತಿ ಬೆಂಗಳೂರಿನಲ್ಲಿ ವಾಸವಿದ್ದು ಸುರೇಶ್ ರವರು ಪಿ ಜಿ ಪಾಳ್ಯ ಗ್ರಾಮದ ಮನೆಯಲ್ಲಿ ವಾಸವಿರುತ್ತಿದ್ದರು.
ಸೋಮವಾರ ತಡರಾತ್ರಿ ಇದ್ದಕ್ಕಿದ್ದ ಹಾಗೆ ಮನೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ, ಬೆಂಕಿಯ ಶಾಖಕ್ಕೆ ಮನೆಯಲ್ಲಿ ಮಲಗಿದ್ದ ಸುರೇಶ್ ರವರು ತಪ್ಪಿಸಿಕೊಂಡು ಹೋಗಿದ್ದಾರೆ ಬೆಂಕಿಯ ಕೆನ್ನಾಲಿಗೆಗೆ ಮನೆಯ ಮೇಲ್ಚಾವಣಿ ಸಂಪೂರ್ಣ ಸುಟ್ಟುಹೋಗಿದೆ ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಿದ್ದಾರೆ.
ತಹಶೀಲ್ದಾರ್ ಭೇಟಿ:
ಪಿ.ಜಿ. ಪಾಳ್ಯ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಆಕಸ್ಮಿಕ ಬೆಂಕಿಗೆ ಮನೆಯ ಮೇಲ್ಚಾವಣಿ ಸುಟ್ಟು ಹೋಗಿರುವ ಬಗ್ಗೆ ಸುರೇಶ್ ರವರು ದೂರವಾಣಿ ಮುಖಾಂತರ ತಹಸಿಲ್ದಾರ್ ವೈಕೆ ಗುರುಪ್ರಸಾದ್ ರವರಿಗೆ ಮಾಹಿತಿ ನೀಡಿದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ತಹಸಿಲ್ದಾರ್ ವೈ ಕೆ ಗುರುಪ್ರಸಾದ್ ಹಾಗೂ ಲೊಕ್ಕನಹಳ್ಳಿ ಕಂದಾಯ ನಿರೀಕ್ಷಕ ಮಹದೇವಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ತಹಶೀಲ್ದಾರ್ ವೈ ಕೆ ಗುರುಪ್ರಸಾದ್ ಮಾತನಾಡಿ ಮನೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲಾತಿಗಳನ್ನು ಚೆಸ್ಕಾಂ ಅಧಿಕಾರಗಳ ಮುಖಾಂತರ ನೀಡಿದರೆ ಪ್ರಕೃತಿ ವಿಕೋಪದಡಿ ನೀಡಲಾಗುವ ಪರಿಹಾರದ ಹಣವನ್ನು ಆದಷ್ಟು ಬೇಗ ಒದಗಿಸುವ ಕೊಡುವುದಾಗಿ ಭರವಸೆ ನೀಡಿದರು.
ವರದಿ :ಉಸ್ಮಾನ್ ಖಾನ್
