ಬಳ್ಳಾರಿ / ಕಂಪ್ಲಿ : ನಗರದ ಮಾರುತಿ ನಗರ ಪುರಸಭೆ ಸಮುದಾಯ ಭವನದ ಎದುರುಗಡೆ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಸಕ ಜೆ.ಎನ್. ಗಣೇಶ ಜನ್ಮದಿನದ ನಿಮಿತ್ಯ ಅಭಿಮಾನಿ ಕಾಂಗ್ರೆಸ್ ಮುಖಂಡ ವಿ. ಮಹಮ್ಮದ್ ಗೌಸ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ನೋಟ್ ಬುಕ್, ಲೇಖನಿ ಸೇರಿದಂತೆ ಕಲಿಕಾ ಸಾಮಗ್ರಿ ಹಾಗೂ ಸಿಹಿಯನ್ನು ಗುರುವಾರ ವಿತರಿಸಿದರು.
ನಂತರ ಮಹಮ್ಮದ್ ಗೌಸ್ ಮಾತನಾಡಿ ಶಾಸಕ ಜೆ.ಎನ್. ಗಣೇಶ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಕ್ಷೇತ್ರದ ಮನೆ ಮನಗಳಲ್ಲಿ ಶಾಸಕರು ಮನೆ ಮಾತಾಗಿದ್ದಾರೆ ಇವರ ಜನ್ಮದಿನವನ್ನು ಕೇಕ್ ಕತ್ತರಿಸಿ ಅದ್ದೂರಿಯಾಗಿ ಆಚರಿಸುವ ಜೊತೆಗೆ ಇಲ್ಲಿನ ಸರ್ಕಾರಿ ಶಾಲೆಯ 35 ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಪೆನ್ನು , ಪೆನ್ಸಿಲ್ ವಿತರಿಸಿ ವಿತರಿಸಿದ್ದು ಮಕ್ಕಳು ಇದರ ಸದುಪಯೋಗದೊಂದಿಗೆ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಸಂತೋಷ್ ಮುಖಂಡರಾದ ಎಂ. ಖಾದರ್ ಭಾಷಾ, ಸಂಜೀವರಾಯ, ಯು. ಭೀಮ, ಯು. ಸಂತೋಷ, ಎಸ್. ಬಸವರಾಜ, ದಾದಾಪೀರ, ರಾಜ, ಮೌಲ, ವಾಸಿಂ, ಕೊಟ್ರೇಶ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
