ಚಾಮರಾಜನಗರ/ಹನೂರು: ನರೇಗಾ ಯೋಜನೆಯಡಿ ಪಂಚಾಯ್ತಿ ಮತ್ತು ಇತರ ಇಲಾಖೆಗಳು ಕೈಗೊಂಡ ಕಾಮಗಾರಿಗಳ ಬಗ್ಗೆ ಸಾರ್ವಜನಿಕ ಸಮ್ಮುಖದಲ್ಲಿ ಮುಕ್ತವಾಗಿ ಚರ್ಚಿಸುವುದು ಸಾಮಾಜಿಕ ಪರಿಶೋಧನೆ ಗ್ರಾಮಸಭೆಯ ಉದ್ದೇಶವಾಗಿದೆ ಎಂದು ತಾಲ್ಲೂಕು ಸಂಯೋಜಕ ನಾರಾಯಣ್ ತಿಳಿಸಿದರು.
ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯ್ತಿ ಆವರಣ ಆಯೋಜಿಸಿದ ಯೋಜನೆಯ 2024-25ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ 2005ರಲ್ಲಿ ನರೇಗಾ ಯೋಜನೆ ಜಾರಿಗೆ ತಂದಿತ್ತು.
2009 ರಲ್ಲಿ ನರೇಗಾ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿತ್ತು.
ರಾಮಾಪುರ ಪಂಚಾಯತಿ ಶೈಕ್ಷಣಿಕ ಅವಧಿಯಲ್ಲಿ 249 ಕಾಮಗಾರಿಗಳನ್ನು ಅನುಷ್ಠಾನಗೊಂಡಿದೆ. ನಡೆದಿರುವ ಕಾಮಗಾರಿಗಳ ಬಗ್ಗೆ ಕಡತ ಪರಿಶೀಲಿಸಿ ಕೆಲಸದ ಸ್ಥಳ ಭೇಟಿ ಮಾಡಿ ಕೂಲಿ ಕಾರ್ಮಿಕರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ವಾಸ್ತವಾಂಶವನ್ನು ಸಾರ್ವಜನಿಕರ ಸಭೆಯಲ್ಲಿ ಮಂಡಿಸಿ ಕಾಮಗಾರಿಗಳ ಬಗ್ಗೆ ಲೋಪ ದೋಷಗಳು ಆಕ್ರಮಗಳು ಇದ್ದರೆ ಸಭೆಗೆ ತಿಳಿಸಿದಲ್ಲಿ ಆಕ್ಷೇಪಣೆಗೆ ಇಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದ ಜನರು ಕೂಲಿ ಅರಸಿ ನಗರ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದು ಮತ್ತು ಸ್ಥಳೀಯವಾಗಿ ಜನರಿಗೆ ಉದ್ಯೋಗ
ಕಲ್ಪಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ.
ಇದರಲ್ಲಿ ಗ್ರಾಮದ ಸಾಮೂಹಿಕ ಅಭಿವೃದ್ಧಿ ಕೆಲಸಗಳು ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಜನರು ಮಾಡಬಹುದು, ಹೆಣ್ಣು ಗಂಡಿಗೆ ಸಮಾನ ವೇತನ ನೀಡಲಾಗುತ್ತದೆ ಕೂಲಿ ಕಾರ್ಮಿಕರು ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಕಾರ್ಡುಗಳನ್ನು ಪಡೆಯಬೇಕು.
ದಿನವೊಂದಕ್ಕೆ 370 ರೂ. ನಂತೆ ಕೂಲಿ ವೇತನ ದೊರೆಯುತ್ತದೆ. ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾರ್ಮಿಕರು ಒಂದು ವರ್ಷದಲ್ಲಿ 100 ದಿನ ಕೆಲಸ ಮಾಡಬಹುದು. ಹಿರಿಯ ನಾಗರೀಕರು
50 ರಷ್ಟು ರಿಯಾಯಿತಿ ಇರುತ್ತದೆ. ಹಾಗೂ ಕೆಲಸದ ಸಮಯದಲ್ಲಿ ಕಾರ್ಮಿಕರಿಗೆ ಅವಘಡಗಳು ಸಂಭವಿಸಿದರೆ ಔಷಧ ಖರ್ಚು ಪಡೆಯಬಹುದು. ಎಂದರು.
15 ನೇ ಹಣ ಕಾಸು ಯೋಜನೆಯಡಿ ಸಹ ಕೇಂದ್ರ ಸರ್ಕಾರದ ಅನುದಾನವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಗೋಳ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಲಾಗುತ್ತದೆ. ಕುಡಿಯುವ ನೀರು ಪೈಪ್ ಲೈನ್ ರಿಪೇರಿ ಚರಂಡಿ ತೆಗೆಯುವುದು ಬೀದಿ ದೀಪ ನಿರ್ವಹಣೆ ಅಂಗನವಾಡಿ ಶಾಲೆಗಳಿಗೆ ಬಣ್ಣ ಬಳಿಯುವುದು ಗ್ರಾಮಗಳ ಸ್ವಚ್ಛತೆ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಬಳತೆ ಮಾಡಲಾಗುವುದು ಎಂದರು.
ಪಿಡಿಒ ಪುಷ್ಪಲತಾ ಮಾತನಾಡಿ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯ ಬಗ್ಗೆ ಸಾರ್ವಜನಿಕರು ಕಚೇರಿಗೆ ಬಂದು ಪಡೆದುಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪರಿತಿಷ್ಟ ಪಂಗಡ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಪಿಡಿಓ ಪುಷ್ಪಲತಾ ಗ್ರಾ.ಪಂ. ಉಪಾಧ್ಯಕ್ಷೆ ರಾಧ, ಕರವಸೂಲಿಗಾರ ಹನುಮಂತ ಮತ್ತು ಸದಸ್ಯರು వివిಧ ఇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ವರದಿ :ಉಸ್ಮಾನ್ ಖಾನ್
