ಕೊಪ್ಪಳ / ಗಂಗಾವತಿ : ಸೂಲಗಿತ್ತಿ ನರಸಮ್ಮ ಅವರು ಕುಗ್ರಾಮದಲ್ಲಿ ಹುಟ್ಟಿ ತನ್ನ ಕಾಯಕದ ಮೂಲಕವೇ ದೆಹಲಿವರೆಗೂ ಹೆಸರು ಮಾಡಿದ್ದಾರೆ ಎಂದು ಗೃಹ ರಕ್ಷಕದಳದ ಘಟಕಾಧಿಕಾರಿ ತಿಮ್ಮಣ್ಣ ನಾಯಕ ಹೇಳಿದರು.
ಇಲ್ಲಿನ ಗಂಗಾವತಿ ನಗರದಲ್ಲಿರುವ ಗೃಹ ರಕ್ಷಕದಳದ ಕಛೇರಿ ಆವರಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಡುಬಡತನದಲ್ಲಿ ಹುಟ್ಟಿ ಬೆಳೆದು, ತಮ್ಮ ಅಜ್ಜಿಯಿಂದ ಕಲಿತ ಸೂಲಗಿತ್ತಿ ಕಸುಬಿನಿಂದ ಸಾವಿರಾರು ಹೆರಿಗೆ ಮಾಡಿಸಿ ತಾಯಿ, ಮಕ್ಕಳ ಜೀವ ಉಳಿಸಿದ್ದಾರೆ. ಅವರ ಕೊಡುಗೆ ಅನನ್ಯವಾಗಿದೆ. ಅವರ ಕಾಯಕ ನಿಷ್ಠೆಯು ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು. ಇಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪ ನಮನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಗೃಹ ರಕ್ಷಕದಳದ ಮಾಜಿ ಘಟಕಾಧಿಕಾರಿ ಎಸ್.ಮೀರಾಸಾಬ್, ಸಿಬ್ಬಂದಿಗಳಾದ ಸಂಗಪ್ಪ ಹಿರೇಮನಿ, ಎನ್.ಮೊಹಮ್ಮದಲಿ, ಕೆ.ಸಂಜೀವಕುಮಾರ, ಎಸ್.ಚಂದ್ರಪ್ಪ, ಹನುಮೇಶ್, ಗಿರಿಮಲ್ಲ ಡಾಕ್ಟರ್, ಶಿವುಪುತ್ರಪ್ಪ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
